ಪ್ರಭಂಜನ ಅಂದರೆ ಹನುಮ. ‘ಪ್ರಭಂಜನ ಚರಿತಂ’ನಲ್ಲಿ ಹನುಮಂತನ ಮೂರು ಅವತಾರಗಳಾದ ಹನುಮ, ಭೀಮ, ಮಧ್ವಾಚಾರ್ಯರ ಕುರಿತು ತೋರಿಸಲಾಗುವುದು. ರಾಮಾಯಣದಲ್ಲಿ ಹನುಮಂತನಾಗಿ, ಮಹಾಭಾರತದಲ್ಲಿ ಭೀಮನಾಗಿ, ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಹನುಮಂತನೇ ಅವತರಿಸಿದ್ದು. ಹನುಮಂತ, ಭೀಮನ ಪಾತ್ರಗಳು ಒಂದು ರೀತಿಯದ್ದಾಗಿದ್ದರೆ, ಮಧ್ವಾಚಾರ್ಯರದ್ದು ಭಿನ್ನ ಪಾತ್ರ. ಮಧ್ವಾಚಾರ್ಯರ ಮಹತ್ವವಾದ ಚರಿತ್ರೆ, ವೀರತ್ವ, ಜ್ಞಾನ, ಅವರ ಸಿದ್ಧಾಂತಗಳನ್ನು ನೃತ್ಯರೂಪಕದಲ್ಲಿ ಪ್ರಸ್ತುತಪಡಿಸಲಾಗುವುದು. ಇದು ಏಕವ್ಯಕ್ತಿ ಪ್ರದರ್ಶನವಾಗಿದ್ದು, ಭುವನಾ ಜಿ. ಪ್ರಸಾದ್ ಸುಮಾರು 30ಕ್ಕೂ ಹೆಚ್ಚು ಪಾತ್ರಗಳನ್ನು ಮಾಡಲಿದ್ದಾರೆ. ಹನುಮ, ಭೀಮ, ಮಧ್ವರನ್ನು ನೆನೆದರೆ ಎಲ್ಲಾ ಕಷ್ಟಗಳು ನೀಗುತ್ತವೆ ಅನ್ನುವ ಪುರಂದರ ದಾಸ ವಾಣಿಯ ಮೂಲಕ ನೃತ್ಯರೂಪಕ ಮುಕ್ತಾಯವಾಗಲಿದೆ.