ಕಾರ್ಯಕ್ರಮದಲ್ಲಿ ಕೆ. ಮೋಹನ್ ನಿರ್ದೇಶನದಲ್ಲಿ ‘ಪಾಂಚಜನ್ಯ’ ಯಕ್ಷಗಾನ ಪ್ರದರ್ಶನ ನಡೆಯಿತು. ಕಲಾವಿದರಾಗಿ ಭಾಗವತ ಲಂಬೋದರ ಹೆಗಡೆ, ಪ್ರಿಯಾಂಕ ಕೆ. ಮೋಹನ್, ಮದ್ದಲೆಯಲ್ಲಿ ಗಣಪತಿ ಭಟ್, ಚಂಡೆಯಲ್ಲಿ ಮಾಧವ ಮತ್ತು ಮಂಜುನಾಥ ನಾವುಡರು ಸಹಕರಿಸಿದರು. ಮುಮ್ಮೇಳದಲ್ಲಿ ಸುಜಯೀಂದ್ರ ಹಂದೆ, ತಮ್ಮಣ್ಣ ಗಾಂವ್ಕರ್, ಪ್ರಶಾಂತ್ ಹೆಗಡೆ, ಗಣೇಶ ಉಪ್ಪುಂದ, ನರಸಿಂಹ ತುಂಗ, ಮನೋಜ್ ಭಟ್, ಉದಯ ಭೋವಿ ಭಾಗವಹಿಸಿದ್ದರು. ಕೋಟ ಸುದರ್ಶನ ಉರಾಳ ಕಾರ್ಯಕ್ರಮದ ಸಂಯೋಜನೆ ಮಾಡಿದ್ದರು.