ನಗರದ ಸಜ್ಜನ್ ರಾವ್ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ಕಲಾಶ್ರೀ ದಿ.ಆರ್.ವೆಂಕಟೇಶಮೂರ್ತಿ ಸ್ಮಾರಕ ಸಂಸ್ಥೆಯ ಸ್ವರಸಿಂಚನ ಬಳಗವು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಕನ್ನಡ ಸಿಂಚನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ‘ಅಪರಾಧಗಳನ್ನು ತಡೆಗಟ್ಟುವ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ಬದಲು ಸಂಗೀತ ಶಾಲೆಗಳನ್ನು ತೆರೆಯಿರಿ’ ಎಂದು ಹೇಳಿದರು. ಸಂಸ್ಥೆಯು ಕನ್ನಡ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ, ಕನ್ನಡ ಪ್ರಜ್ಞೆಯನ್ನು ಹರಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.