ನವದೆಹಲಿ: ಇಲ್ಲಿನ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಬೆಂಬಲ ನೀಡಿ ಉಪವಾಸ ಕುಳಿತಿರುವ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಮರತೂರು ಗ್ರಾಮದ ರೈತ ಅಜಯ್ಕುಮಾರ್ ಪಾಟೀಲ ಸೋಮವಾರ ತೀವ್ರ ಅಸ್ವಸ್ಥರಾದರು.
ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಚೇತರಿಸಿಕೊಂಡಿದ್ದು, ಸಂಜೆ ಮತ್ತೆ ಉಪವಾಸ ಸ್ಥಳಕ್ಕೆ ಬಂದು ಸತ್ಯಾಗ್ರಹ ಮುಂದುವರಿಸಿದರು.