ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೃತವರ್ಷಿಣಿ’ಗೆ 25ರ ನೆನಪಲ್ಲಿ ‘ತುಂತುರು ಅಲ್ಲಿ ನೀರ ಹಾಡು’

Last Updated 5 ನವೆಂಬರ್ 2022, 5:18 IST
ಅಕ್ಷರ ಗಾತ್ರ

ಬೆಂಗಳೂರು: ಗೀತ ರಚನೆಕಾರ, ಸಂಗೀತ ನಿರ್ದೇಶಕ ಕೆ. ಕಲ್ಯಾಣ್‌ ಅವರ ಗೀತೆಗಳ ಗಾಯನದವಿಶೇಷ ಕಾರ್ಯಕ್ರಮ ‘ತುಂತುರು ಅಲ್ಲಿ ನೀರ ಹಾಡು’ 19ರಂದು ಸಂಜೆ 6ರಿಂದ ಬೆಂಗಳೂರಿನ ಬಸವನಗುಡಿ ಎನ್‌.ಆರ್‌.ಕಾಲೊನಿಯ ಡಾ.ಅಶ್ವತ್ಥ್‌ ಕಲಾಭವನದಲ್ಲಿ ನಡೆಯಲಿದೆ.

ಸ್ವಸ್ತಿ ಈವೆಂಟ್ಸ್‌ ಸಂಸ್ಥೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಕಲ್ಯಾಣ್‌ ಅವರನ್ನು ಸನ್ಮಾನಿಸಲಾಗುವುದು. ಕಲ್ಯಾಣ್‌ ಅವರ ರಚನೆ, ಸಂಗೀತ ನಿರ್ದೇಶನದ ಗೀತೆಗಳನ್ನು ಗಾಯಕರಾದ ಜಯಸಿಂಹ, ಅನಿತಾ ಭಟ್‌, ಉದಯ್‌ ಅಂಕೋಲ, ಪ್ರಿಯಾ ಯಾದವ್‌ ಹಾಡಲಿದ್ದಾರೆ. ಸಂಗೀತ ನಿರ್ದೇಶಕ ವಿ.ಮನೋಹರ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸೀಮಿತ ಪ್ರೇಕ್ಷಕರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಮುಂಚಿತವಾಗಿ ಹೆಸರು ನೋಂದಾಯಿಸಬೇಕು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

ಮಾಹಿತಿಗೆ ಮೊಬೈಲ್‌: ಸಂಪರ್ಕಿಸಬಹುದು 98459 42513

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT