ಬೆಂಗಳೂರು: ಕರ್ನಾಟಕ ಸಂಗೀತ ಪಿತಾಮಹ ಶ್ರೀ ತ್ಯಾಗರಾಜರ 174ನೇ ಆರಾಧನೆ ಪ್ರಯುಕ್ತ ಜ.29ರಿಂದ ಫೆ.2ರವರೆಗೆ ನಗರದ ಶೃಂಗೇರಿ ಶಂಕರ ಮಠದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಐದು ದಿನಗಳ ಕಾಲ ಪ್ರತಿ ದಿನ ಸಂಜೆ 5 ಗಂಟೆಯಿಂದ ಖ್ಯಾತ ವಿದ್ವಾಂಸರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದ್ದು, Fb.com/Prajavani.net ನಲ್ಲಿ ಇದರ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.
ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರಿಶಂಕರ್, ಹಿರಿಯ ವೀಣಾ ವಾದಕ ಪ್ರೊ.ಆರ್.ವಿಶ್ವೇಶ್ವರನ್, ಸಂಸದ ತೇಜಸ್ವಿ ಸೂರ್ಯ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಐದು ದಿನಗಳ ಕಾಲ ಆರ್.ಕೆ.ಪದ್ಮನಾಭ, ಆನೂರು ಅನಂತಕೃಷ್ಣ ಶರ್ಮ, ನಾಗವಲ್ಲಿ ನಾಗರಾಜ್, ಆರ್.ಎ.ರಮಾಮಣಿ, ವಿದ್ಯಾಭೂಷಣ, ಎಂ.ಎಸ್.ಶೀಲ, ಸುಮಾ ಸುಧೀಂದ್ರ ಹಾಗೂ ಇತರ ಪ್ರಖ್ಯಾತ ಕಲಾವಿದರಿಂದ ಗಾಯನ, ವಾದನ ಕಾರ್ಯಕ್ರಮಗಳು ರಂಜಿಸಲಿವೆ.