ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪನಾ ಬರೆದ ಕವಿತೆ: ಸಮನ್ವಯಗೀತೆ

Last Updated 19 ಫೆಬ್ರುವರಿ 2022, 14:56 IST
ಅಕ್ಷರ ಗಾತ್ರ

ತನ್ನ ಮಾತೇ ಮಾತು ತನ್ನ ದೈವವೇ ದೈವ

ತನ್ನ ಮತವೇ ಮತವೆಂಬ ಹಮ್ಮು ಹಠದಲಿ

ಕಳೆದುಕೊಂಡಿತು ನಾಡು ಅಪಾರ ಸುಖ ಬಲಿ

ಮೇಲು ಕೀಳೆಂಬ ತಾರತಮ್ಯದ ಅಸಹ್ಯ ಕೆಂಡ

ಬಲು ನೊಂದು ಮನೆ ಮಠ ಬೆಂದು ಕಣ್ಣೀರನುಂಡ

ಮಂದಿಯ ಕೇಳುವವರಾರು ಸಂಕಟ ಪ್ರಚಂಡ

ಹಿಂಸೆಯಲಿ ನೆತ್ತರಲಿ ನಿಟ್ಟುಸಿರಿನಲಿ ಎಲ್ಲಿದೆ ದಾರಿ

ಸುಖ ಶಾಂತಿ ನೆಮ್ಮದಿಯು ಬಿಸಿಲುಗುದುರೆ ಸವಾರಿ

ಶೈವ ವೈಷ್ಣವರು ಶರಣರು ಶ್ರಮಣರು ಸಿಖ್ಖರು

ಮಹಮದೀಯರು ಕ್ರೈಸ್ತರು ಬೌದ್ಧರು ಎಲ್ಲರು

ಅವರವರ ಗುಡಿಯಲವರ ಪ್ರಾರ್ಥನೆ ಸಲಿಸುತಿರಲಿ

ಭಾರತಾಂಬೆಯ ಪೂಜಿಸಲು ಎಂದೂ ಮರೆಯದಿರಲಿ

ಕೋಪತಾಪಗಳಿಂದ ಈರ್ಷ್ಯೆ ದ್ವೇಷಗಳಿಂದಲಿ

ಮುಕ್ತರಾಗುತ ಸೇರಿ ನಾಡತೇರನು ಎಳೆಯುತಿರಲಿ

ಹಿಂದೂ ದೇಶವಿದು ಎಂದೂ ಹೋಳಾಗದಿರಲಿ

ವಂದೇ ಮಾತರಂ ಆಸೇತು ಮೊಳಗುತಿರಲಿ

ಧರ್ಮ ಯಾವುದೆ ಇರಲಿ ಹತ್ತು ಮತ್ತೆ ಬರಲಿ

ಸಮನ್ವಯದ ಹಣತೆಯದು ನಿತ್ಯ ಬೆಳಗುತಿರಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT