<p>ಸ್ವಪ್ನ ದೇವತೆಯ<br />ಶಿಲ್ಪದ ಕರಳುಬಳ್ಳಿಯಲಿ<br />ಸಿಕ್ಕಿಹಾಕಿಕೊಂಡ ಕಲಾವಿದನ ಉಳಿ<br />ಉಳಿದು ಹೋಗಿದೆ ಹಾಗೇ</p>.<p>ಯಾವ ಮಾಯಕದಲಿ<br />ಕಡಲಿನೆದೆಗೆ ತಾಗಿತೋ ಈ ಗಾಳಿ<br />ಅಲೆ ಅಲೆಯ ಸೆಳವಿಗೆ ಇಡೀ ಕಡಲೇ<br />ಬಲೆ<br />ಹಗಲಿರುಳು ಅಲೆಯುವ ಎಲ್ಲ ಅಲೆಗಳಿಗೆ<br />ದಡ ಮುಟ್ಟುವ ಖಾತ್ರಿ ಇಲ್ಲ</p>.<p>ನಿಲಯ ಕಲಾವಿದನ ಖಾಸಾ<br />ರಾಗವೊಂದು ತುಂಬಿದ ಮೆಹಫಿಲಿನಲಿ<br />ಗಂಟಲಿನಲೇ ಸಿಕ್ಕಿ ಹಾಕಿಕೊಂಡಂತೆ</p>.<p>ಮೊದಲ ಬಾರಿ ಬಂಗುಡೆ<br />ಮೆಲ್ಲಲು ಹೋದ ಬಯಲು ಸೀಮೆಯ<br />ಪ್ರವಾಸೀ ಬಾಲಕನ ಗಂಟಲಿನೊಳು ಮೀನು ಮುಳ್ಳು ಸಿಕ್ಕಂತೆ</p>.<p>ಮೊದಲ ಬಾರಿ ಕಡಲತಡಿಗೆ<br />ಬಂದ ಜೋಡಿಗಳ ಫಜೀತಿ<br />ಹೇಳ - ತೀರ ದು.<br /><br />ಹೋದ ವರ್ಷ ಇದೇ ಮಳೆಯ ವೇಳೆ ಇಲ್ಲಿ ಬೇರೆ ಬೇರೆ<br />ಯಾದ ಪ್ರೇಮಿಗಳು<br />ಹೊಸ ವಿರಹ ಕವಿತೆ ಹೊಸೆದು<br />ಮತ್ತೆ<br />ಎದಿರು ಬದಿರಾಗಿ ನಿಂತಿದ್ದಾರೆ<br />ಯುಗಾದಿಯ ಹೊಸ ಸಂಚಿಕೆಯಲಿ</p>.<p>ಯಾವುದೋ ಒಂದು ಅಲೆ<br />ನೆಲ ಕಾಣುತ್ತದೆ ಎಂದೋ<br />ಮಂಗಳಾರತಿಯ ಸುಟ್ಟ ತಟ್ಟೆಯ ಕಾಸಿಗೂ<br />ಒಂದು ತುಂಡು ಬೆಲ್ಲ ಸಿಕ್ಕೇ ಸಿಗುತ್ತದೆ<br />ಎಂದೋ</p>.<p>ಸ್ವಪ್ನ ದೇವತೆಯ ಒಡಲಿಗೆ ನೋವಾಗದಂತೆ<br />ಉಳಿ ತೆಗೆಯೋ ಹುಡುಗಾ<br />ಇನ್ನೇನು ಮಳೆ ಮಾಯಿಸುತ್ತದೆ ಅವಳ ಹೊಕ್ಕಳ ಗಾಯ...</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಸ್ವಪ್ನ ದೇವತೆಯ<br />ಶಿಲ್ಪದ ಕರಳುಬಳ್ಳಿಯಲಿ<br />ಸಿಕ್ಕಿಹಾಕಿಕೊಂಡ ಕಲಾವಿದನ ಉಳಿ<br />ಉಳಿದು ಹೋಗಿದೆ ಹಾಗೇ</p>.<p>ಯಾವ ಮಾಯಕದಲಿ<br />ಕಡಲಿನೆದೆಗೆ ತಾಗಿತೋ ಈ ಗಾಳಿ<br />ಅಲೆ ಅಲೆಯ ಸೆಳವಿಗೆ ಇಡೀ ಕಡಲೇ<br />ಬಲೆ<br />ಹಗಲಿರುಳು ಅಲೆಯುವ ಎಲ್ಲ ಅಲೆಗಳಿಗೆ<br />ದಡ ಮುಟ್ಟುವ ಖಾತ್ರಿ ಇಲ್ಲ</p>.<p>ನಿಲಯ ಕಲಾವಿದನ ಖಾಸಾ<br />ರಾಗವೊಂದು ತುಂಬಿದ ಮೆಹಫಿಲಿನಲಿ<br />ಗಂಟಲಿನಲೇ ಸಿಕ್ಕಿ ಹಾಕಿಕೊಂಡಂತೆ</p>.<p>ಮೊದಲ ಬಾರಿ ಬಂಗುಡೆ<br />ಮೆಲ್ಲಲು ಹೋದ ಬಯಲು ಸೀಮೆಯ<br />ಪ್ರವಾಸೀ ಬಾಲಕನ ಗಂಟಲಿನೊಳು ಮೀನು ಮುಳ್ಳು ಸಿಕ್ಕಂತೆ</p>.<p>ಮೊದಲ ಬಾರಿ ಕಡಲತಡಿಗೆ<br />ಬಂದ ಜೋಡಿಗಳ ಫಜೀತಿ<br />ಹೇಳ - ತೀರ ದು.<br /><br />ಹೋದ ವರ್ಷ ಇದೇ ಮಳೆಯ ವೇಳೆ ಇಲ್ಲಿ ಬೇರೆ ಬೇರೆ<br />ಯಾದ ಪ್ರೇಮಿಗಳು<br />ಹೊಸ ವಿರಹ ಕವಿತೆ ಹೊಸೆದು<br />ಮತ್ತೆ<br />ಎದಿರು ಬದಿರಾಗಿ ನಿಂತಿದ್ದಾರೆ<br />ಯುಗಾದಿಯ ಹೊಸ ಸಂಚಿಕೆಯಲಿ</p>.<p>ಯಾವುದೋ ಒಂದು ಅಲೆ<br />ನೆಲ ಕಾಣುತ್ತದೆ ಎಂದೋ<br />ಮಂಗಳಾರತಿಯ ಸುಟ್ಟ ತಟ್ಟೆಯ ಕಾಸಿಗೂ<br />ಒಂದು ತುಂಡು ಬೆಲ್ಲ ಸಿಕ್ಕೇ ಸಿಗುತ್ತದೆ<br />ಎಂದೋ</p>.<p>ಸ್ವಪ್ನ ದೇವತೆಯ ಒಡಲಿಗೆ ನೋವಾಗದಂತೆ<br />ಉಳಿ ತೆಗೆಯೋ ಹುಡುಗಾ<br />ಇನ್ನೇನು ಮಳೆ ಮಾಯಿಸುತ್ತದೆ ಅವಳ ಹೊಕ್ಕಳ ಗಾಯ...</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>