ಜ್ಯೋತಿಷಿಯ ಮೂಹೂರ್ತ, ನೆರೆಹೊರೆಯ ಸಂಭ್ರಮ
ಹೆತ್ತವರ ಸಮಾಧಾನ, ಸಂಬಂಧಗಳ ಹುಟ್ಟು
ಸ್ನೇಹಿತರ ಚೇಷ್ಟೆ, ವಿನೋದಗಳು
ಒಂದುಗೂಡಿಸಬಹುದು ನಮ್ಮನ್ನು ಭೌತಿಕವಾಗಿ ಮಾತ್ರ
ಕಲಿತುಕೊಳ್ಳಬೇಕು ನೀನು ಎಲ್ಲವನ್ನೂ ಬಹುಬೇಗ
ಬದುಕಿನ ಲೆಕ್ಕ ಅಷ್ಟು ಸರಳವಲ್ಲ
ಮನಸ್ಸನ್ನು ಹುರಿಗೊಳಿಸಬೇಕು, ಹರಿತಗೊಳಿಸಬೇಕು
ಈ ವಿಧಿ ಕೊಟ್ಟ ಪರೀಕ್ಷೆಯನ್ನು ಒಟ್ಟಾಗಿಯೇ ಬರೆಯಬೇಕು
ತಪ್ಪಿದರೆ ಆ ಕ್ಷಣವೇ ತಿದ್ದಿಕೊಳ್ಳಬೇಕು