ನಡುರಾತ್ರಿಯ ಇಬ್ಬನಿ
ಚುಂಬಿಸಿದ್ದು ಸುಡು ಪೇಯವನಷ್ಟೇ ಅಲ್ಲ
ಮೌನ ಸೇತುವೆಯ ಮುರಿದ
ಮಧುರ ಮಾತುಗಳನ್ನೂ; ಎಲ್ಲವೂ
ಕಳೆದುಹೋದಂತಿತ್ತು,,, ಹೌದು ಎಲ್ಲವೂ
ಜೀವ ಭಾವ ನೋವು ನಲಿವು,,,,ಎಲ್ಲವೂ
ಬೆಸೆದ ಬೆರಳುಗಳ ನಡುವೆ ಹರಿದಾಡಿದ
ತಂತುಗಳು ಸದ್ದು ಮಾಡಿದಾಗ
ಎದೆಯೊಳಗಿನ ನಾದ ಸ್ವರಗೂಡಿತ್ತು
ನಿಘಂಟಿನಲಿ ಸ್ನೇಹ ಕಾಣದಾಗಿತ್ತು ;