ಆದರೆ, ಆಶ್ಚರ್ಯವೆಂಬಂತೆ ಸುಧಾಮ ಮನೆಗೆ ಮರಳಿದಾಗ ತನ್ನ ಗುಡಿಸಲು ಇದ್ದ ಜಾಗದಲ್ಲಿ ದೊಡ್ಡ ಮನೆ ತಲೆ ಎತ್ತಿರುವುದನ್ನು ಕಂಡ. ಅಷ್ಟೇ ಅಲ್ಲ, ಶ್ರೀಕೃಷ್ಣನು ಸುಧಾಮನ ಕುಟುಂಬಕ್ಕೆ ಹಣದ ಸಹಾಯವನ್ನೂ ಮಾಡಿದ್ದ. ತಾನು ಬಾಯಿಬಿಟ್ಟು ಕೇಳದಿದ್ದರೂ ತನ್ನ ಅಗತ್ಯ ಏನು ಎಂಬುದನ್ನು ಅರ್ಥಮಾಡಿಕೊಂಡ ಬಾಲ್ಯದ ಗೆಳೆಯ ಶ್ರೀಕೃಷ್ಣನಿಗೆ ಸುಧಾಮ ಕೃತಜ್ಞತೆ ಸಮರ್ಪಿಸಿದ.