ಹುಬ್ಬಳ್ಳಿ: ಹುಬ್ಬಳ್ಳಿ–ಗದಗ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಭೂಮಿ ನೀಡಿರುವ ರೈತರಿಗೆ ಏಪ್ರಿಲ್ 5ರೊಳಗೆ ಸೂಕ್ತ ಪರಿಹಾರ ಪಾವತಿಸದಿದ್ದರೆ, ಕಾಮಗಾರಿ ತಡೆಯಲಾಗುವುದು ಎಂದು ಹೆದ್ದಾರಿ ವಿಸ್ತರಣೆಗೆ ಭೂಮಿ ನೀಡಿರುವ ಭಂಡಿವಾಡ, ಶಿರಗುಪ್ಪಿ, ನಲವಡಿ, ಭದ್ರಾಪೂರ, ಅಣ್ಣಿಗೇರಿ ಹಾಗೂ ಮಂಟೂರ ಗ್ರಾಮಗಳ ರೈತರು ಎಚ್ಚರಿಕೆ ನೀಡಿದ್ದಾರೆ.