ಆ ಸಾಧು ಮೆಲ್ಲನೆ ಕಣ್ಣು ತೆರೆದು ಇವರನ್ನು ನೋಡಿ ‘ಯಾರು ನೀವು? ನನ್ನಿಂದೇನಾಗಬೇಕು’ ಎಂದು ಕೇಳಿದರು. ಈ ಸಹೋದರರು ತಮ್ಮ ಸಂಕಷ್ಟ, ಬಡತನದ ಸ್ಥಿತಿ ಹೇಳಿ ಸಹಾಯಕ್ಕಾಗಿ ಬೇಡಿಕೆಯಿತ್ತರು. ಒಂದು ಕ್ಷಣ ಧ್ಯಾನಮಗ್ನರಾದ ಸಾಧು ಕಣ್ಣು ತೆರೆದು ‘ನಾನು ನಿಮಗೆ ತಲಾ ಒಂದು ಚಿನ್ನದ ನಾಣ್ಯ ಇರುವ ಬಿಂದಿಗೆ ಕೊಡುವೆ. ನ್ಯಾಯದಿಂದ ಬಾಳಿ. ಸುಳ್ಳು ನುಡಿಯಬೇಡಿ...’ ಎಂದು ಎಚ್ಚರಿಸಿ, ಕೊಟ್ಟರು.