ಹುಬ್ಬಳ್ಳಿ: ಇಲ್ಲಿನ ಬೈಲಪ್ಪನವರ ನಗರದ ಕುಂಭಕೋಣಂ ಪ್ಲಾಟ್ನಲ್ಲಿ ಪಾಲಿಕೆಯಿಂದ ನೂತನವಾಗಿ ಅಭಿವೃದ್ಧಿ ಪಡಿಸಲಾಗಿರುವ ಉದ್ಯಾನ
ವನ್ನು ಗುರುವಾರ ಸಂಜೆ ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಅವರು ವೀಕ್ಷಣೆ ಮಾಡುವ ಮೂಲಕ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದರು.ಈ ಸಂದರ್ಭದಲ್ಲಿ ಸಾರ್ವಜನಿಕರು, ಜೋಶಿ ಮತ್ತು ಶೆಟ್ಟರ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಟೀ, ಕಾಫಿ ವಿತರಣೆ ಮಾಡಲಾಯಿತು.