ಮೈಸೂರು: ‘ಯಾರು ಕಿಂಗ್, ಯಾರು ಕಿಂಗ್ ಮೇಕರ್ ಎಂಬುದನ್ನು ಮೇ 12ರಂದು ಜನರೇ ತೀರ್ಮಾನಿಸುತ್ತಾರೆ. ನನಗೂ ರಾಜಕೀಯ ಗೊತ್ತಿದೆ, ನಾನೇನು ನಿನ್ನೆ ಮೊನ್ನೆಯ ರಾಜಕಾರಣಿಯಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಲ್ಲಿ ಸೋಮವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಏನು ಮಾಡಬೇಕು, ಏನು ಮಾಡಬಾರದು ಎಂಬುದು ನನಗೆ ಗೊತ್ತಿದೆ. ಹೀಗಾಗಿಯೇ, ಸಿದ್ದರಾಮಯ್ಯ ಬದಲಿಗೆ ಮಾಯಾವತಿ ನೇತೃತ್ವದ ಬಿಎಸ್ಪಿ ಜೊತೆ ಹೋಗಿದ್ದೇನೆ. ಎಲ್ಲಾ ಪ್ರಶ್ನೆಗಳಿಗೆ 15ರಂದು ಉತ್ತರ ಸಿಗಲಿದೆ. ಸಿದ್ದರಾಮಯ್ಯಗೆ ಉತ್ತರ ಕೊಡುವ ಅಗತ್ಯವಿಲ್ಲ’ ಎಂದರು.