ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಮಾಹಿತಿ ಕಣಜ ಸಿದ್ಧಗಂಗೆಯ ಜಾತ್ರೆ

Last Updated 22 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಹಳಯ ಮೈಸೂರು ಭಾಗದಲ್ಲಿ ಸಿದ್ಧಗಂಗೆಯ ಜಾತ್ರೆ ಪ್ರಸಿದ್ಧವಾದುದು. 1902ರಲ್ಲಿ ಉದ್ಧಾನ ಶಿವಯೋಗಿಗಳು ಮಠಾಧ್ಯಕ್ಷರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆ ಆರಂಭವಾಯಿತು. ಪ್ರತಿ ವರ್ಷ ಶಿವರಾತ್ರಿಯ ಮರುದಿನ ರಥೋತ್ಸವ ಜರುಗುತ್ತದೆ. ಜಾತ್ರೆಯ ಕಾರ್ಯಕ್ರಮಗಳಿಗೆ ಶಿವರಾತ್ರಿ ಹಬ್ಬಕ್ಕೂ ಒಂದು ವಾರದ ಮುನ್ನವೇ ಚಾಲನೆ ದೊರೆಯುತ್ತವೆ.

ಸಿದ್ಧಗಂಗೆಯ ಜಾತ್ರೆ ಬರೀ ಉತ್ಸವ, ರಥೋತ್ಸವದ ಚೌಕಟ್ಟಿನಲ್ಲಿ ನಡೆಯುವುದಿಲ್ಲ. ರೈತರಿಗೆ ಮಾಹಿತಿಯ ಕಣಜವಾಗಿದೆ. ಈ ಜಾತ್ರೆಯ ಪ್ರಮುಖ ಆಕರ್ಷಣೆಯೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ದನಗಳ ಪರಿಷೆ. ರಥೋತ್ಸವಕ್ಕೆ ಸುಮಾರು 10 ದಿನಗಳಿದೆ ಎನ್ನುವಾಗಲೇ ಮಠದ ಹಿಂಬದಿಯ ಬಯಲಿನಲ್ಲಿ ದನಗಳ ಪರಿಷೆ ಕೂಡುತ್ತದೆ. ಬೇಸಾಯಕ್ಕೆ ಅಗತ್ಯವಾದ ರಾಸುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡುವ ರೈತರು ದೂರದ ಸ್ಥಳಗಳಿಂದ ಬರುವರು. ‘ಉತ್ತಮ ರಾಸು’ ಆಯ್ಕೆಗೆ ಸ್ಪರ್ಧೆಯೂ ಜರುಗುತ್ತದೆ. ಈ ಎಲ್ಲ ದೃಷ್ಟಿಯಲ್ಲಿ ನೋಡುವುದಾದರೆ ಸಿದ್ಧಗಂಗೆಯ ಜಾತ್ರೆ ‘ರೈತೋತ್ಸವ’ದ ರೀತಿ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT