ಈ ವಿವಾದ ಸೃಷ್ಟಿಯಾದಾಗಿನಿಂದ ಪಂಚಾಚಾರ್ಯರನ್ನು ನಿಂದಿಸುವುದೇ ತೋಂಟದ ಸಿದ್ಧಲಿಂಗ ಸ್ವಾಮೀಜಿ ಕಾಯಕವಾಗಿದೆ. ‘ಇದಿರ ಹಳಿಯಲು ಬೇಡ... ಇದೇ ಅಂತರಂಗ ಶುದ್ಧಿ’ ಎಂದು ಬಸವಣ್ಣ ಹೇಳಿದ್ದು, ಅವರಿಗೆ ಅರ್ಥವಾಗಿಲ್ಲವೇ? ಪಂಚಾಚಾರ್ಯರಿಗೂ ಭಕ್ತರು ಇದ್ದಾರೆ. ಈ ಸ್ವಾಮಿಗಳನ್ನು ಟೀಕಿಸುವುದರಿಂದ ಅವರ ಭಕ್ತರ ಮನಸ್ಸಿಗೆ ನೋವಾಗುತ್ತದೆ ಎಂಬ ಜ್ಞಾನ ಇವರಿಗೆ ಇಲ್ಲವೇ? ಇನ್ನಾದರೂ ಅವರು ಬದಲಾಗಲಿ.