ನಾನು ಒಬ್ಬ ಸರ್ಕಾರಿ ನೌಕರನಾಗಿದ್ದು, ಸರ್ಕಾರಿ ನೌಕರನಿಗೆ ಇಲಾಖಾ ಪರೀಕ್ಷೆಯು ಡಿಸೆಂಬರ್ 26, 2010 ರಂದು ಇದ್ದು, ಈ ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅಗತ್ಯ. ಆದರೆ ಡಿಸೆಂಬರ್ 26, ರಂದು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಇರುವುದರಿಂದ ಸರ್ಕಾರಿ ನೌಕರ ಚುನಾವಣಾ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕಾಗಿರುವುದರಿಂದ ಇಲಾಖಾ ಪರೀಕ್ಷೆಗೆ ಹಾಜರಾಗುವುದು ಕಷ್ಟ.
ಅಲ್ಲದೆ ಒಂದು ವೇಳೆ ಚುನಾವಣಾ ಕರ್ತವ್ಯ ಇಲ್ಲದಿದ್ದರೂ ಕೂಡ ಸರ್ಕಾರಿ ನೌಕರನಿಗೆ ಈ ಮೊದಲೇ ಕರ್ನಾಟಕ ಲೋಕಸೇವಾ ಆಯೋಗ ಪ್ರವೇಶ ಪತ್ರದಲ್ಲಿ ಸೂಚಿಸದ ಶಾಲಾ-ಕಾಲೇಜುಗಳಲ್ಲಿ ಮತದಾನ ನಡೆಯುತ್ತಿದ್ದರೆ ಅವನಿಗೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಆದುದರಿಂದ ಕರ್ನಾಟಕ ಲೋಕಸೇವಾ ಆಯೋಗ ಈ ಗೊಂದಲವನ್ನು ನಿವಾರಿಸಬೇಕು ಎನ್ನುವುದು ನನ್ನಂತಹ ಹಲವು ಸರ್ಕಾರಿ ನೌಕರನ ಆಶಯವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.