ಕೃತಿ ಕುರಿತು: `ಒಂದು ಜೀವನ ಸಾಲದು!~ ಪತ್ರಕರ್ತ ಕುಲದೀಪ್ ನಯ್ಯರ್ ಅವರ ಆತ್ಮಕಥೆ ಮತ್ತು ಆ ಸ್ವರೂಪದಲ್ಲಿರುವ ಸ್ವಾತಂತ್ರ್ಯೋತ್ತರ ಭಾರತದ ಸತ್ಯಕತೆ. ಇದು ಒಬ್ಬ ವ್ಯಕ್ತಿಯ ಬದುಕಿನ ವಿವರಣೆಗಿಂತ ಕಳೆದ ಏಳು ದಶಕಗಳ ಏಳುಬೀಳುಗಳ ನಿರೂಪಣೆಯೇ ಹೆಚ್ಚು. ಇದು ಸ್ವಂತ ಸಂಗತಿಗಳ ಆಪ್ತಕಥನವಲ್ಲ, ಸಮಕಾಲೀನ ಚರಿತ್ರೆಯ ಕೋಶ. ತೊಂಬತ್ತರ ಎತ್ತರದಲ್ಲಿರುವ ಕುಲದೀಪ್ ನಯ್ಯರ್ ಭಾರತದ ಹಿರಿಯ ಪತ್ರಕರ್ತ, ಅಂಕಣಕಾರ, ಲೇಖಕ, ಮಾನವ ಹಕ್ಕುಗಳ ಪ್ರತಿಪಾದಕ. ಅವರ `ಬಿಟ್ವೀನ್ ದಿ ಲೈನ್ಸ್~ ಸಿಂಡಿಕೇಟೆಡ್ ಅಂಕಣ ದೇಶ ವಿದೇಶಗಳಲ್ಲಿ 14 ಭಾಷೆಗಳಲ್ಲಿ 80ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ.