ಕರಕುಶಲ ತರಬೇತಿ
ಬೆಂಗಳೂರು: ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಪ್ರಾಯೋಜಿತ, ಬಿಡದಿ ಬಳಿಯಲ್ಲಿ ಇರುವ ಜೋಗರದೊಡ್ಡಿಯಲ್ಲಿ ಇರುವ ಕೆ. ಪಿ. ಜೆ. ಪ್ರಭು ಕರಕುಶಲ ತರಬೇತಿ ಸಂಸ್ಥೆಯು ಮರ- ಕಲ್ಲಿನ ಕೆತ್ತನೆ, ಲೋಹಶಿಲ್ಪ ಮತ್ತು ಟೆರ್ರಾಕೋಟಾ ಕಲೆಗಳಲ್ಲಿ ಉಚಿತ ತರಬೇತಿ ನೀಡಲು ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಿದೆ.
18ರಿಂದ 35 ವರ್ಷದೊಳಗಿನ ಯುವಕರು ತರಬೇತಿಗೆ ಅರ್ಹರು. ಪ್ರವೇಶ ಅರ್ಜಿಗಳನ್ನು ಈ ತಿಂಗಳ 25ರಂದು ನಡೆಯುವ ಸಂದರ್ಶನ ಸಂದರ್ಭ ಅಥವಾ ಅದಕ್ಕೂ ಮೊದಲೇ ಸಲ್ಲಿಸಬಹುದು. ಸಂದರ್ಶನಕ್ಕೆ ಪಾಲಕರು/ ಪೋಷಕರ ಹಾಜರಾತಿ ಕಡ್ಡಾಯ. ಗ್ರಾಮೀಣ ಪ್ರದೇಶದವರಿಗೆ ಆದ್ಯತೆ ಇದೆ. ಮಾಹಿತಿಗೆ 080-7280 127/ 94818 88176 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.