ತಾಳವಾದ್ಯೋತ್ಸವದಲ್ಲಿ...

ಪರ್ಕಸಿವ್ ಆರ್ಟ್ಸ್ ಸೆಂಟರ್ ಆಶ್ರಯದಲ್ಲಿ 32ನೇ ವಾರ್ಷಿಕ ತಾಳವಾದ್ಯೋತ್ಸವ ಮತ್ತು ಸಂಗೀತ ಸಮ್ಮೇಳನ `ತಾಳವಾದ್ಯೋತ್ಸವ 2013': ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ. ಶನಿವಾರ ಸಂಜೆ 5ಕ್ಕೆ ಬಿ.ಎಸ್. ಪ್ರಶಾಂತ್ ಅವರಿಂದ `ವಿಶೇಷ ವಿಷಯಾಧಾರಿತ ನಡೆಭೇದಗಳುಳ್ಳ ರಚನೆಗಳು' ಉಪನ್ಯಾಸ.
ಸಂಜೆ 6ಕ್ಕೆ ಸಿಕ್ಕಿಲ್ ಗುರುಚರಣ್ ಅವರಿಂದ ಗಾಯನ. ಚಾರುಲತಾ ರಾಮಾನುಜಂ (ಪಿಟೀಲು), ಎ.ವಿ. ಆನಂದ್ (ಮೃದಂಗ), ಜಿ. ಗುರುಪ್ರಸನ್ನ (ಖಂಜರಿ). ಭಾನುವಾರ ಬೆಳಿಗ್ಗೆ 10ಕ್ಕೆ ಸಮಾರೋಪ.
ಅಮೃತೂರ್ ಜಾನಕಿ ಅಮ್ಮಾಳ್ ಸ್ಮಾರಕ ತಾಳವಾದ್ಯ ಸ್ಪರ್ಧೆಯ ವಿಜೇತರಿಗೆ ಜಿ.ಎಸ್. ಶ್ರೀರಾಮ್ ಸ್ಮಾರಕ ಬಹುಮಾನ ವಿತರಣೆ. ಮಧ್ಯಾಹ್ನ 12ಕ್ಕೆ ಲಯಲಾವಣ್ಯ ವಿಶೇಷ ತಾಳವಾದ್ಯ ಗೋಷ್ಠಿ.
ನಿರ್ದೇಶನ ಮತ್ತು ಮೃದಂಗ: ಆನೂರು ಅನಂತಕೃಷ್ಣ ಶರ್ಮ. ಜಿ. ಗುರುಪ್ರಸನ್ನ (ಖಂಜರಿ), ಉದಯರಾಜ್ ಕರ್ಪೂರ್, ಕಿರಣ್ ಗೋಡ್ಖಿಂಡಿ, ಎಸ್. ಮಧುಸೂದನ್, ಜಗದೀಶ್ ಡಿ. ಕುರ್ತಕೋಟಿ (ತಬಲಾ), ಬಿ.ಎಸ್. ಅರುಣ್ ಕುಮಾರ್ (ಜಾಸ್ ಡ್ರಮ್), ಪ್ರಮಥ್ ಕಿರಣ್ (ಕಾಂಗೋಸ್ ಮತ್ತು ಇತರೆ ತಾಳವಾದ್ಯ), ಸೋಮಶೇಖರ್ ಜೋಯಿಸ್, ಆನೂರು ವಿನೋದ್ ಶ್ಯಾಮ್, ಸುನಾದ್ ಆನೂರ್, ತಿರುಮಲೆ ಗೋಪಿ ಶ್ರವಣ್, ಎಸ್.ಪಿ. ನಾಗೇಂದ್ರ ಪ್ರಸಾದ್, ಚಿದಾನಂದ್, ಸುದತ್ತ (ಕೊನಗೋಲು ಖಂಜರಿ ಮತ್ತು ಇತರೆ ತಾಳವಾದ್ಯ).
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.