ಬೆಟ್ಟದ ಮೇಲಿನ ದೊಣೆಗೆ ಕಾಯಕಲ್ಪ
ದೊಡ್ಡಬಳ್ಳಾಪುರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹುಲುಕುಡಿ ವೀರಭದ್ರಸ್ವಾಮಿ ಬೆಟ್ಟದ ಮೇಲಿರುವ ನೀರಿನ ದೊಣೆಯಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸುವ ಕಾರ್ಯಕ್ಕೆ ಇದೇ ಪ್ರಥಮ ಬಾರಿಗೆ ಬುಧವಾರ ಚಾಲನೆ ನೀಡಲಾಯಿತು.
ಬೆಟ್ಟಕ್ಕೆ ಬರುತ್ತಿದ್ದ ಭಕ್ತರಿಗೆ ಇದು ಕುಡಿಯುವ ನೀರಿನ ಆಸೆರೆಯಾಗಿತ್ತು. ಬೇಸಿಗೆಯಲ್ಲೂ ಸಹ ಬತ್ತದೆ ನೀರಿನಿಂದ ತುಂಬಿರುತ್ತಿದ್ದ ಈ ದೊಣೆಯಲ್ಲಿ ಇತ್ತೀಚೆಗೆ ಕಳೆಗಿಡಗಳು ಬೆಳೆದು, ಹೂಳು ತುಂಬಿತ್ತು. ಕುಡಿಯುವ ನೀರು ಕಲುಷಿತಗೊಂಡಿತ್ತು. ಇದರಿಂದ ಭಕ್ತರೇ ಮುಂದಾಗಿ ಸ್ವಪ್ರೇರಣೆಯಿಂದ ಈ ದೊಣೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.