ರಾಷ್ಟ್ರೀಯ ಸಂಕ್ಷಿಪ್ತ ಸುದ್ದಿಗಳು
ರಾಷ್ಟ್ರಪತಿಗೆ ಮನವಿ
ನವದೆಹಲಿ: ಪಶ್ಚಿಮ ಬಂಗಾಳದ ಗ್ರಾಮದಲ್ಲಿ ನಡೆದ ವಿದ್ಯಾರ್ಥಿನಿ ಅತ್ಯಾಚಾರ- ಕೊಲೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಕೆ ಕುಟುಂಬದ ಸದಸ್ಯರು ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
`ಸುಪ್ರೀಂ' ನೋಟಿಸ್
ನವದೆಹಲಿ: ಪೊಲೀಸರ ವಿರುದ್ಧ ಜನರ ದೂರು ವಿಚಾರಣೆಗೆ `ಪೊಲೀಸ್ ದೂರು ಪ್ರಾಧಿಕಾರ' ಸ್ಥಾಪಿಸುವ ಕುರಿತು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸಂಸತ್ ಅಧಿವೇಶನ
ನವದೆಹಲಿ (ಪಿಟಿಐ): ಲೋಕಸಭೆ ಮುಂಗಾರು ಅಧಿವೇಶನ ಆ. 5ರಿಂದ ಆರಂಭವಾಗಲಿದ್ದು 30ರ ವರೆಗೆ ಒಟ್ಟು 26 ದಿನಗಳ ಕಾಲ ಅಧಿವೇಶನ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.