<p><strong>ನವದೆಹಲಿ/ಪಣಜಿ/ (ಪಿಟಿಐ/ಐಎಎನ್ಎಸ್</strong>): ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಚೌಕಟ್ಟಿಗೆ ತರುವ ಕೇಂದ್ರ ಮಾಹಿತಿ ಆಯೋಗದ ಐತಿಹಾಸಿಕ ತೀರ್ಪಿಗೆ ಕಾಂಗ್ರೆಸ್, ಜೆಡಿ(ಯು), ಸಿಪಿಐ(ಎಂ) ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರೆ, ಪ್ರಮುಖ ಪ್ರತಿಪಕ್ಷ ಬಿಜೆಪಿ ಸ್ವಾಗತಿಸಿದೆ.<br /> <br /> ಪ್ರಮುಖ ರಾಜಕೀಯ ಪಕ್ಷ ಕಾಂಗ್ರೆಸ್ ಕೇಂದ್ರ ಮಾಹಿತಿ ಆಯೋಗದ ತೀರ್ಪಿಗೆ ತನ್ನ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದರಿಂದ ಕೆಲವು ದುಸ್ಸಾಹಸಿಗಳು ಸಾಂವಿಧಾನಿಕ ಸಂಸ್ಥೆಗಳನ್ನು ಹಾಳುಗೆಡುವಬಲ್ಲವು. ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ತ್ರಿವೇದಿ ಸುದ್ದಿಗಾರರಿಗೆ ತಿಳಿಸಿದ್ದಾರೆ.<br /> <br /> ಇದಕ್ಕೆ ದನಿಗೂಡಿಸಿರುವ ಜೆಡಿ(ಯು) ಪಕ್ಷದ ಅಧ್ಯಕ್ಷ ಶರದ್ ಯಾದವ್ ಅವರು ಕೇಂದ್ರ ಮಾಹಿತಿ ಆಯೋಗದ ತೀರ್ಪು ತಮಗೆ ದಿಗ್ಭ್ರಮೆ ಹಾಗೂ ಆಘಾತ ತಂದಿದ್ದು, ಇದು ನ್ಯಾಯಯುವಾಗಿಲ್ಲ ಎಂದು ಹೇಳಿದ್ದಾರೆ.<br /> <br /> ಪ್ರಮುಖ ಎಡಪಕ್ಷ ಸಿಪಿಐ(ಎಂ) ಸಹ ಕೇಂದ್ರ ಮಾಹಿತಿ ಆಯೋಗದ ತೀರ್ಪಿಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಪಕ್ಷದ ಸಿದ್ದಾಂತ, ಆದರ್ಶ, ನಾಯಕತ್ವದ ಮೇಲೆ ಭರವಸೆ ನಂಬಿಕೆ ಇಟ್ಟು ಸ್ವಇಚ್ಛೆಯಿಂದ ನಾಗರಿಕರು ಸೇರಿರುವ ಗುಂಪೇ ರಾಜಕೀಯ ಪಕ್ಷವಾಗಿದೆ. ಈ ಪಕ್ಷಗಳು ಅದರ ಸದಸ್ಯರಿಗೆ ಮಾತ್ರ ಉತ್ತರದಾಯಿಗಳಾಗಿರುತ್ತವೆ ಎಂದು ಪಕ್ಷದ ಪಾಲಿಟ್ಬ್ಯೂರೊ ಹೊರಡಿಸಿರುವ ಪ್ರಕಟಣೆಯು ತಿಳಿಸಿದೆ.<br /> <br /> ಆದರೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಇದನ್ನು ಸ್ವಾಗತಿಸಿದೆ. ಪಾರದರ್ಶಕತೆ, ಜವಾಬ್ದಾರಿಯನ್ನು ತರುವ ಯಾವುದೇ ಪ್ರಯತ್ನವನ್ನು ಬಿಜೆಪಿ ವಿರೋಧಿಸವುದಿಲ್ಲ ಎಂದು ಹೇಳಿರುವ ಅದರ ವಕ್ತಾರರು ಸಿಐಸಿ ಆದೇಶದಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.<br /> <br /> ಗೋವಾದ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರೂ ಕೂಡ ಸಿಐಸಿ ತೀರ್ಪನ್ನು ಸ್ವಾಗತಿಸಿದ್ದಾರೆ. ಇದೊಂದು ಒಳ್ಳೆಯ ಸಂಗತಿ ಎಂದು ಅವರು ಹೇಳಿದ್ದಾರೆ.<br /> <br /> ಈ ಮಧ್ಯೆ ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆಯಗಳ ಸಂಸ್ಥೆಯಾದ ಎಡಿಆರ್ ದೆಹಲಿ ನ್ಯಾಯಾಲಯದಲ್ಲಿ ಕೇವಿಯಟ್ ಒಂದನ್ನು ಸಲ್ಲಿಸಿದ್ದು, ಕೇಂದ್ರ ಮಾಹಿತಿ ಆಯೋಗದ ತೀರ್ಪಿಗೆ ತಡೆಯಾಜ್ಞೆ ನೀಡಬಾರದೆಂದು ಒತ್ತಾಯಿಸಿದೆ.<br /> <br /> ರಾಜಕೀಯ ಪಕ್ಷಗಳು ತಕ್ಷಣವೇ ನ್ಯಾಯಾಲಯದಲ್ಲಿ ಈ ಆಜ್ಞೆಗೆ ತಡೆಯಾಜ್ಞೆ ತರಲು ಯತ್ನಿಸುವ ಸಾಧ್ಯತೆ ಇರುವುದರಿಂದ ತಾವು ಕೇವಿಯಟ್ ಸಲ್ಲಿಸಿರುವುದಾಗಿ ಎಡಿಆರ್ನ ರಾಷ್ಟ್ರೀಯ ಸಂಯೋಜಕ ಅನಿಲ್ ಬರಿವಾಲ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ/ಪಣಜಿ/ (ಪಿಟಿಐ/ಐಎಎನ್ಎಸ್</strong>): ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಚೌಕಟ್ಟಿಗೆ ತರುವ ಕೇಂದ್ರ ಮಾಹಿತಿ ಆಯೋಗದ ಐತಿಹಾಸಿಕ ತೀರ್ಪಿಗೆ ಕಾಂಗ್ರೆಸ್, ಜೆಡಿ(ಯು), ಸಿಪಿಐ(ಎಂ) ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರೆ, ಪ್ರಮುಖ ಪ್ರತಿಪಕ್ಷ ಬಿಜೆಪಿ ಸ್ವಾಗತಿಸಿದೆ.<br /> <br /> ಪ್ರಮುಖ ರಾಜಕೀಯ ಪಕ್ಷ ಕಾಂಗ್ರೆಸ್ ಕೇಂದ್ರ ಮಾಹಿತಿ ಆಯೋಗದ ತೀರ್ಪಿಗೆ ತನ್ನ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದರಿಂದ ಕೆಲವು ದುಸ್ಸಾಹಸಿಗಳು ಸಾಂವಿಧಾನಿಕ ಸಂಸ್ಥೆಗಳನ್ನು ಹಾಳುಗೆಡುವಬಲ್ಲವು. ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ತ್ರಿವೇದಿ ಸುದ್ದಿಗಾರರಿಗೆ ತಿಳಿಸಿದ್ದಾರೆ.<br /> <br /> ಇದಕ್ಕೆ ದನಿಗೂಡಿಸಿರುವ ಜೆಡಿ(ಯು) ಪಕ್ಷದ ಅಧ್ಯಕ್ಷ ಶರದ್ ಯಾದವ್ ಅವರು ಕೇಂದ್ರ ಮಾಹಿತಿ ಆಯೋಗದ ತೀರ್ಪು ತಮಗೆ ದಿಗ್ಭ್ರಮೆ ಹಾಗೂ ಆಘಾತ ತಂದಿದ್ದು, ಇದು ನ್ಯಾಯಯುವಾಗಿಲ್ಲ ಎಂದು ಹೇಳಿದ್ದಾರೆ.<br /> <br /> ಪ್ರಮುಖ ಎಡಪಕ್ಷ ಸಿಪಿಐ(ಎಂ) ಸಹ ಕೇಂದ್ರ ಮಾಹಿತಿ ಆಯೋಗದ ತೀರ್ಪಿಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಪಕ್ಷದ ಸಿದ್ದಾಂತ, ಆದರ್ಶ, ನಾಯಕತ್ವದ ಮೇಲೆ ಭರವಸೆ ನಂಬಿಕೆ ಇಟ್ಟು ಸ್ವಇಚ್ಛೆಯಿಂದ ನಾಗರಿಕರು ಸೇರಿರುವ ಗುಂಪೇ ರಾಜಕೀಯ ಪಕ್ಷವಾಗಿದೆ. ಈ ಪಕ್ಷಗಳು ಅದರ ಸದಸ್ಯರಿಗೆ ಮಾತ್ರ ಉತ್ತರದಾಯಿಗಳಾಗಿರುತ್ತವೆ ಎಂದು ಪಕ್ಷದ ಪಾಲಿಟ್ಬ್ಯೂರೊ ಹೊರಡಿಸಿರುವ ಪ್ರಕಟಣೆಯು ತಿಳಿಸಿದೆ.<br /> <br /> ಆದರೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಇದನ್ನು ಸ್ವಾಗತಿಸಿದೆ. ಪಾರದರ್ಶಕತೆ, ಜವಾಬ್ದಾರಿಯನ್ನು ತರುವ ಯಾವುದೇ ಪ್ರಯತ್ನವನ್ನು ಬಿಜೆಪಿ ವಿರೋಧಿಸವುದಿಲ್ಲ ಎಂದು ಹೇಳಿರುವ ಅದರ ವಕ್ತಾರರು ಸಿಐಸಿ ಆದೇಶದಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.<br /> <br /> ಗೋವಾದ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರೂ ಕೂಡ ಸಿಐಸಿ ತೀರ್ಪನ್ನು ಸ್ವಾಗತಿಸಿದ್ದಾರೆ. ಇದೊಂದು ಒಳ್ಳೆಯ ಸಂಗತಿ ಎಂದು ಅವರು ಹೇಳಿದ್ದಾರೆ.<br /> <br /> ಈ ಮಧ್ಯೆ ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆಯಗಳ ಸಂಸ್ಥೆಯಾದ ಎಡಿಆರ್ ದೆಹಲಿ ನ್ಯಾಯಾಲಯದಲ್ಲಿ ಕೇವಿಯಟ್ ಒಂದನ್ನು ಸಲ್ಲಿಸಿದ್ದು, ಕೇಂದ್ರ ಮಾಹಿತಿ ಆಯೋಗದ ತೀರ್ಪಿಗೆ ತಡೆಯಾಜ್ಞೆ ನೀಡಬಾರದೆಂದು ಒತ್ತಾಯಿಸಿದೆ.<br /> <br /> ರಾಜಕೀಯ ಪಕ್ಷಗಳು ತಕ್ಷಣವೇ ನ್ಯಾಯಾಲಯದಲ್ಲಿ ಈ ಆಜ್ಞೆಗೆ ತಡೆಯಾಜ್ಞೆ ತರಲು ಯತ್ನಿಸುವ ಸಾಧ್ಯತೆ ಇರುವುದರಿಂದ ತಾವು ಕೇವಿಯಟ್ ಸಲ್ಲಿಸಿರುವುದಾಗಿ ಎಡಿಆರ್ನ ರಾಷ್ಟ್ರೀಯ ಸಂಯೋಜಕ ಅನಿಲ್ ಬರಿವಾಲ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>