ಬೆಂಗಳೂರು: ರಾಜ್ಯದ ಅಂದಾಜು 1.4 ಲಕ್ಷ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಇದ್ದು, ಆರು ವರ್ಷದೊಳಗಿನ 61 ಸಾವಿರ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ತೀವ್ರವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ.ವಿ. ರಮಣ ರೆಡ್ಡಿ ತಿಳಿಸಿದರು.
ವಿಕಾಸಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅವರು, `ಆರು ವರ್ಷದೊಳಗಿನ ಮಕ್ಕಳ ಪೈಕಿ ಅಂದಾಜು 35 ಸಾವಿರ ಮಂದಿ (ಶೇಕಡ 32ರಷ್ಟು) ಅಂಗನವಾಡಿಗೆ ಬರುತ್ತಿದ್ದಾರೆ. ಇವರ ಪೈಕಿ 18 ಸಾವಿರ ಮಕ್ಕಳಲ್ಲಿ ಸಾಧಾರಣ ಪ್ರಮಾಣದ ಪೌಷ್ಟಿಕಾಂಶದ ಕೊರತೆ ಇದೆ~ ಎಂದು ಅವರು ತಿಳಿಸಿದರು.