ರಾಹುಲ್ ಭೇಟಿಗೆ ಪ್ರತಿಕೂಲ ಹವಾಮಾನ ಅಡ್ಡಿ: ಕೊಚ್ಚಿ (ಪಿಟಿಐ): ಕಾಲ್ತುಳಿತದಿಂದ 102 ಮಂದಿ ಅಯ್ಯಪ್ಪಸ್ವಾಮಿ ಭಕ್ತರು ಸಾವಿಗೀಡಾದ ಕೇರಳದ ವಂಡಿಪೆರಿಯಾರ್ ಪ್ರದೇಶಕ್ಕೆ ಭೇಟಿ ನೀಡುವ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಅವರ ಉದ್ದೇಶಕ್ಕೆ ಪ್ರತಿಕೂಲ ಹವಾಮಾನ ಅಡ್ಡಿಯಾಯಿತು. ರಾಹುಲ್ ಹಾಗೂ ಇತರರು ಇದ್ದ ಹೆಲಿಕಾಪ್ಟರ್ ಇಳಿಸಲು ಮಂದ ಬೆಳಕು ಮತ್ತು ಮಳೆ ಅಡ್ಡಿಯಾಗಿದ್ದರಿಂದ ಅವರೆಲ್ಲ ಹಿಂದಿರುಗಬೇಕಾಯಿತು.