ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಶಾಲೆಯಿಂದ ಒಬ್ಬ ವಿದ್ಯಾರ್ಥಿ ಪಾಲ್ಗೊಳ್ಳಲು ಅವಕಾಶವಿದೆ. ಚಿತ್ರಕಲೆಯಲ್ಲಿ ಪರಿಣಿತರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಚಿತ್ರಕಲೆಯ ಮೂಲಾಂಶಗಳ ಬಗ್ಗೆ ತಿಳಿಸಲಿದ್ದಾರೆ ಎಂದು ದತ್ತಿ ದಾನಿ ವಕೀಲ ಕೆ.ಆರ್. ಸುಭಾಷ್ ಮಾಹಿತಿ ನೀಡಿದರು.
ನಿವೃತ್ತ ಡಿಡಿಪಿಐ ಕೆ. ಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಬಿಇಒ ಜಿ.ಆರ್. ತಿಪ್ಪೇಶಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಇ.ಆರ್.ಸುಜಾತಾ, ನಿವೃತ್ತ ಶಿಕ್ಷಕ ಎಂ.ಅಬ್ದುಲ್ ವಾಹಿದ್, ಬೆಂಗಳೂರಿನ ಆರ್ಬಿಎಎನ್ಎಂಎಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಜಯಪ್ಪ, ಆಡಳಿತಾಧಿಕಾರಿ ಸುಮತೀಂದ್ರ ನಾಡಿಗ್, ಸಂಪನ್ಮೂಲ ವ್ಯಕ್ತಿ ಎಂ.ಎನ್.ರವಿಕುಮಾರ್ ಭಾಗವಹಿ ಸಲಿದ್ದಾರೆ. ಕೆ.ಆರ್.ಸುಭಾಷ್ ಬಹುಮಾನ ವಿತರಿಸುವರು.
ಬೆಂಗಳೂರಿನ ಬೆನಕ ಕಲಾ ಮಂದಿರದ ಪ್ರಾಂಶುಪಾಲ ಪಿ.ಎಂ.ರವಿನಾಥ್ ಪಟ್ಟಣಶೆಟ್ಟಿ, ರೋಟರಿ ಮಾಜಿ ಅಧ್ಯಕ್ಷ ಎಸ್.ಪಿ.ಜಗನ್ನಾಥ್, ನಿವೃತ್ತ ಶಿಕ್ಷಕ ಎಸ್.ಸಿ.ಯಲ್ಲಪ್ಪ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ನಾಡಿಗ್ ಮಾಹಿತಿ ನೀಡಿದರು.