ಮೈಸೂರು: ನಗರದ ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ (ಜ. 14–20)ಕ್ಕೆ ಸಜ್ಜಾಗುತ್ತಿದೆ.
ರಂಗಾಯಣದ ಆವರಣದಲ್ಲಿರುವ ಬೊಮ್ಮನಹಳ್ಳಿ ಕಿಂದರಿಜೋಗಿ ಪ್ರತಿಮೆಗೆ ಬಣ್ಣ ಬಳಿಯಲಾಗಿದ್ದು, ರಂಗಾಸಕ್ತರನ್ನು ಸೆಳೆಯುತ್ತಿದೆ. 22 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, 22 ಅಡಿ ಎತ್ತರವಿದೆ. ‘ರಂಗಾಯಣದ ನಿರ್ದೇಶಕರಾಗಿದ್ದ ಬಿ.ವಿ. ಕಾರಂತರು ಕುವೆಂಪು ಅವರ ಬೊಮ್ಮನಹಳ್ಳಿ ಕಿಂದರಿಜೋಗಿ ನಾಟಕವನ್ನು ನಿರ್ದೇಶಿಸಿದ್ದರು. ಅದೇ ವರ್ಷ ಜಂಬೂಸವಾರಿಯಂದು ರಂಗಾಯಣದ ಸ್ತಬ್ಧಚಿತ್ರ ಇರಬೇಕೆಂದಾಗ 14 ಅಡಿ ಎತ್ತರದ ಕಿಂದರಿಜೋಗಿಯ ಸ್ತಬ್ಧಚಿತ್ರವನ್ನು ನಿರ್ಮಿಸಲಾಯಿತು. ನಂತರ ಅದನ್ನು ರಂಗಾಯಣದ ಆವರಣದಲ್ಲಿಡಲಾಗಿತ್ತು.
ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಯಿತು’ ಎಂದು ಮೆಲುಕು ಹಾಕುತ್ತಾರೆ ರಂಗಾಯಣದ ಶಿಕ್ಷಕ ದ್ವಾರ್ಕಿ (ಎಚ್.ಆರ್. ದ್ವಾರಕಾನಾಥ್).