ಮುಂಬೈ (ಪಿಟಿಐ): ದೇಶದ ಹಲವೆಡೆ ಗಣಿಗಾರಿಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ 150 ಲಕ್ಷ ಟನ್ಕಬ್ಬಿಣದ ಅದಿರು ಆಮದು ಮಾಡಿಕೊಳ್ಳುವ ಅಗತ್ಯ ಇದೆ ಎಂದು ಭಾರತೀಯ ಗಣಿಗಾರಿಕೆ ಉದ್ಯಮಗಳ ಒಕ್ಕೂಟ (ಎಫ್ಐಎಂಐ)ಹೇಳಿದೆ.
ಪ್ರಸಕ್ತ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ 90 ಲಕ್ಷ ಟನ್ಗಳಷ್ಟು ಕಬ್ಬಿಣದ ಅದಿರು ಆಮದು ಮಾಡಿಕೊಳ್ಳಲಾಗಿದೆ ಎಂದು `ಎಫ್ಐಎಂಐ~ ಉಪಾಧ್ಯಕ್ಷ ಬಸಂತ್ ಪೊಡಾರ್ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ, ಗೋವಾ ಮತ್ತು ಒಡಿಶಾದಲ್ಲಿ ಗಣಿಗಾರಿಗೆ ಸ್ಥಗಿತಗೊಂಡಿದೆ.