ಬೆಂಗಳೂರು: ಬಾಂಗ್ಲಾದೇಶ ವಿಮೋಚನೆಗಾಗಿ 1971ರಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣಾರ್ಥ ಬಿಜೆಪಿಯ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಘಟಕದ ವತಿಯಿಂದ ಇದೇ 16ರಂದು `ವಿಜಯ ದಿವಸ' ಹಮ್ಮಿಕೊಳ್ಳಲಾಗಿದೆ.
ನಗರದ ಹಲಸೂರು ಕೆರೆ ಸಮೀಪ ಇರುವ ಆರ್ಬಿಎನ್ಎಂಎಸ್ ಮೈದಾನದಲ್ಲಿ ಸಂಜೆ 4.25ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ ಎಂದು ನಿವೃತ್ತ ಸೇನಾಧಿಕಾರಿ ಎಸ್.ಎಸ್.ರಾಜನ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಯುದ್ಧದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಪಾಕ್ ಸೇನೆಯನ್ನು ಸದೆಬಡಿಯಲಾಯಿತು. ಇದರಲ್ಲಿ 3853 ಭಾರತೀಯ ಯೋಧರು ಹುತಾತ್ಮರಾಗಿದ್ದರು.