ಕೆಇಬಿ ವೃತ್ತದಿಂದ ಆರಂಭಗೊಳ್ಳುವ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಯ ಕಲಾ ತಂಡ ಪಾಲ್ಗೊಳ್ಳಲಿವೆ. ಬಹಿರಂಗ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಮಂಡಳಿ ಮುಖಂಡ ಕೆ.ಎನ್.ರಾಮಚಂದ್ರನ್, ಆರ್.ಮಾನಸಯ್ಯ, ವಕೀಲ ಪ್ರಕಾಶ್, ಕೊಪ್ಪಳ ಬಂಡಾಯ ಸಾಹಿತಿ ವಿಠಪ್ಪ ಗೋರಂಟ್ಲಿ, ಕ್ರಾಂತಿಕಾರಿ ಕವಿ ದಾನಪ್ಪ ನಿಲೋಗಲ್, ಮಡಿಕೇರಿ ಜಿಲ್ಲೆ ವಕೀಲ ವಿದ್ಯಾಧರ, ವೈ.ಕೆ.ಚಂದ್ರಶೇಖರಪ್ಪ, ಸೂಫಿ ತತ್ವ ಅನುಭವ ಚಿಂತನಾ ವೇದಿಕೆ ಸಂಚಾಲಕ ಮುರ್ಷಿದ್ಜಾನ್, ಟಿ.ಯು.ಸಿ.ಐ. ಮುಖಂಡ ಗುಲ್ಬರ್ಗಾದ ಎ.ಬಿ.ದಾಸ್, ದಲಿತ ಸಂಘರ್ಷ ಸಮಿತಿಯ ಕೆ.ಪಿ.ರಾಜರತ್ನಂ, ರೈತ ಸಂಘದ ಕೆ.ಕೆ.ಕೃಷ್ಣೇಗೌಡ, ದುಗ್ಗಪ್ಪಗೌಡ ಪಾಲ್ಗೊಳ್ಳಲಿದ್ದಾರೆ ಎಂದರು.