ನವದೆಹಲಿ (ಐಎಎನ್ಎಸ್): ಪ್ರಧಾನಿ ಮನಮೋಹನ್ ಸಿಂಗ್ ಅವರು, ~2 ಜಿ ಸ್ಪೆಕ್ರ್ಟಂ ಹಗರಣ~ದ ವಿಚಾರಣೆಗೆ ~ಜಂಟಿ ಸದನ ಸಮಿತಿ~ (ಜೆಪಿಸಿ) ರಚಿಸಲು ಸಂಸತ್ತಿನಲ್ಲಿ ಒಪ್ಪಿಗೆ ನೀಡಿರುವುದನ್ನು ಬಿಜೆಪಿ ಸ್ವಾಗತಿಸಿದೆ.
~ಇದು ಕೇವಲ ಆಡಳಿತ ಮತ್ತು ವಿರೋಧಿ ಪಕ್ಷಕ್ಕೆ ಸಂದ ಜಯವಲ್ಲ. ಒಟ್ಟಾರೆ ಪ್ರಜಾಪ್ರಭುತ್ವಕ್ಕೆ ಸಂದ ಜಯ~ಎಂದು ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಮಂಗಳವಾರ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಸತ್ ಉದ್ದೇಶಿಸಿ ಮಾತನಾಡಿ ~2ಜಿ ಸ್ಪೆಕ್ಟ್ರಮ್~ ವಿಚಾರಣೆಗೆ ಸರ್ಕಾರ ಜೆಪಿಸಿ ರಚಿಸಲು ಒಪ್ಪಿಗೆ ನೀಡಿದೆ ಎಂದು ಘೋಷಿಸಿದ್ದರು.