ನವದೆಹಲಿ (ಪಿಟಿಐ): 2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಕೇಂದ್ರದ ಗೃಹಖಾತೆ ಸಚಿವ ಪಿ ಚಿದಂಬರಂ ಅವರು ಪಾತ್ರದ ಕುರಿತು ತನಿಖೆ ನಡೆಸಬೇಕೆ? ಬೇಡವೆ? ಎಂಬುದನ್ನು ಈ ಹಗರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ತೀರ್ಮಾನಿಸಲಿ ಎಂದಿರುವ ಸುಪ್ರೀಂ ಕೋರ್ಟ್, ಅದೇ ಸಂದರ್ಭದಲ್ಲಿ ಈ ಹಗರಣದಲ್ಲಿನ ಚಿದಂಬರಂ ಅವರ ಪಾತ್ರದ ಬಗ್ಗೆ ಸಿಬಿಐಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಬೇಕೆಂಬ ಮನವಿಯನ್ನು ಗುರುವಾರ ತಳ್ಳಿಹಾಕಿದೆ.