ತಮ್ಮ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಪತಿ ದರ್ಶನ್ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೆ 9ರಂದು ಪೊಲೀಸರಿಗೆ ಐದು ಪುಟಗಳ ದೂರು ಸಲ್ಲಿಸಿದಾಗ ಅವರನ್ನು ಬಂಧಿಸಲಾಗಿತ್ತು. ತನ್ನನ್ನು ಮತ್ತು ತಮ್ಮ ಮಗುವನ್ನು ಸಾಯಿಸಲು ದರ್ಶನ್ ಮುಂದಾಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಗಂಟೆಗಳ ನಂತರ , ~ತಾವು ಬಚ್ಚಲಲ್ಲಿ ಬಿದ್ದಾಗ ತಮಗೆ ಗಾಯಗಳಾಗಿವೆ, ಪತಿ ದರ್ಶನ್ ತಮ್ಮ ಮೇಲೆ ಹಲ್ಲೆ ಮಾಡಿಲ್ಲ~ ಎಂದು ಬದಲಿ ಹೇಳಿಕೆ ನೀಡಿದಾಗ ಪೊಲಿಸರು ಅದನ್ನು ದಾಖಲಿಸಿಕೊಳ್ಲಲಿಲ್ಲ.