ಮಂಗಳವಾರ, 18-12-1962
ಹೊಸ ಯೋಜನೆ
ಭದ್ರಾವತಿ, ಡಿ. 17 - ಭದ್ರಾವತಿ ಕಾಗದದ ಕಾರ್ಖಾನೆಯ ಉತ್ಪಾದನೆಯನ್ನು ದಿನಕ್ಕೆ 30 ಟನ್ನಿನಿಂದ 70 ಟನ್ನುಗಳಿಗೆ ಹೆಚ್ಚಿಸುವ ಹೊಸ ವಿಸ್ತರಣಾ ಯೋಜನೆಯನ್ನು ರಾಜ್ಯಪಾಲರಾದ ಶ್ರೀ ಜಯಚಾಮರಾಜ ಒಡೆಯರ್ರವರು ಇಂದು ಸಂಜೆ ಇಲ್ಲಿ ಉದ್ಘಾಟಿಸಿದರು.
ಚೀಣಿ ಸೇನೆ ಇನ್ನೂ ಕದಲಿಲ್ಲ
ಬೊಮ್ಡಿಲಾ, ಡಿ. 17 - ಬೊಮ್ಡಿಲಾಕ್ಕೆ ಕೇವಲ 5 ಮೈಲಿ ಉತ್ತರದಲ್ಲಿ ಚೀಣಿ ಸೇನೆಗಳಿವೆಯೆಂದು ಇಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸುತ್ತವೆ. ರಸ್ತೆಯ ಮೂಲಕ ಈ ಸೇನೆ ಇರುವ ಸ್ಥಳಕ್ಕೆ ಸುಮಾರು 12 ಮೈಲಿಗಳಾಗುತ್ತದೆ.