ಕಳೆದ ಡಿಸೆಂಬರ್ನಿಂದ ಈ ಡಿಸೆಂಬರ್ವರೆಗೆ, 2013 ಅತ್ಯಾಚಾರದ ವರ್ಷವೆಂಬಂತಾಗಿದೆ. ದೆಹಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಗುಂಪಿನಲ್ಲಿದ್ದ ಬಾಲಕನಿಂದ ಮೊದಲುಗೊಂಡು ನ್ಯಾಯಮೂರ್ತಿ ಗಂಗೂಲಿ ಎಂಬ ವೃದ್ಧರವರೆಗೆ, ಸೈಕೋಪಾತ್ ಉಮೇಶನಂತಹ ವ್ಯಕ್ತಿಗಳ ಮೊದಲುಗೊಂಡು ತೆಹೆಲ್ಕಾದ ತರುಣ್ ತೇಜ್ಪಾಲ್ವರೆಗೆ, ಆಸಾರಾಮ್ ಮೊದಲುಗೊಂಡು ವಿಶ್ವವಿದ್ಯಾಲಯ ಅಧ್ಯಾಪಕ ರವರೆಗೆ ಈ ಕೀಚಕರ ಕಬಂಧಬಾಹು ಹಬ್ಬಿದೆ.
ಕಾಮಾತುರರಿಗೆ ಲಜ್ಜೆ ಎಂಬುದಿಲ್ಲ, ವಯಸ್ಸಿನ ಅಂತರವಿಲ್ಲ, ತಂದೆಗೆ ಮಗಳೆಂಬ, ಸೋದರಗೆ ಸೋದರಿಯೆಂಬ, ಗುರುವಿಗೆ ಶಿಷ್ಯೆ ಎಂಬ, ಅಧಿಕಾರಿಗೆ ಸಹಾಯಕಿ ಎಂಬ ಕಿಂಚಿತ್ ಪರಿಜ್ಞಾನವೂ ಇಲ್ಲ. ನಿತ್ಯ ಇದೇ ಸುದ್ದಿ!
ಈ ಕೀಚಕ ಪರಂಪರೆ ಮಹಾಭಾರತದಷ್ಟು ಹಳೆಯದು. ಹಿಂದೆ ಹೆಣ್ಣುಮಕ್ಕಳು ಈಗಿನಂತೆ ತಮಗಾದ ಅನ್ಯಾಯ ಅವಮಾನ, ಅತ್ಯಾಚಾರಗಳನ್ನು ಬಹಿರಂಗಪಡಿಸಲು ಮುಂದೆ ಬರುತ್ತಿರಲಿಲ್ಲ. ಆದರೀಗ ಅವರ ಪರ ಕಾನೂನು ಬಿಗಿ ಇರುವುದರಿಂದ ತಮಗಾದ ಅನ್ಯಾಯಗಳ ವಿರುದ್ಧ ದನಿ ಎತ್ತುತ್ತಿದ್ದಾರೆ. ಆದ್ದರಿಂದಲೇ ಬಹಳಷ್ಟು ರೇಪ್ ಹಗರಣಗಳು ಬಯಲಾಗುತ್ತಿವೆ. ಆದರೂ ಕೆಲವೊಮ್ಮೆ ಗಟ್ಟಿ ಎವಿಡೆನ್್ಸ ದೊರೆಯದ ಕಾರಣ ಕೆಲವು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿ ಕೊಳ್ಳುತ್ತಿದ್ದಾರೆ.
ಆದ್ದರಿಂದ ಕಾನೂನಿಗೆ ಇನ್ನಷ್ಟು ಭೀಮ ಬಲ ತುಂಬಿ ಕೀಚಕರು ನುಣುಚಿಕೊಳ್ಳದಂತೆ ಸರ್ಕಾರ ಕಾರ್ಯತತ್ಪರವಾದರೆ ಹೆಣ್ಣು ಮಕ್ಕಳ ಭವಿಷ್ಯ ಉತ್ತಮವಾದೀತು.