ಹೂವಿನಹಡಗಲಿ: ತಾಲ್ಲೂಕಿನ ಹಿರೇಬನ್ನಿಮಟ್ಟಿ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದರೆನ್ನುವ ಖಚಿತ ಮಾಹಿತಿಯ ಮೇರಿಗೆ ತಹಶೀಲ್ದಾರ್ ಬಸವರಾಜ ಸೋಮಣ್ಣನವರ್ ಮತ್ತು ಗಣಿ ಮತ್ತು ಭೂ-ವಿಜ್ಞಾನ ಇಲಾಖೆಯ ಅಧಿಕಾರಿಗಳು ಪೊಲೀಸರೊಂದಿಗೆ ದಾಳಿ ನಡೆಸಿ 22 ಯಾಂತ್ರೀಕೃತ ದೋಣಿಗಳು ಮತ್ತು 3 ಹಿಟಾಚಿ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.
ತುಂಗಭದ್ರಾ ನದಿಯಲ್ಲಿ ಮೈಲಾರ ಜಾತ್ರೆಯ ಪ್ರಯುಕ್ತ ನೀರು ಬಿಟ್ಟ ಹಿನ್ನೆಲೆಯಲ್ಲಿ ಯಾಂತ್ರಿಕೃತ ದೋಣಿ ಗಳನ್ನು ಬಳಸಿ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದರು ಎನ್ನಲಾಗಿದೆ.
ಇದೇ ತಿಂಗಳಲ್ಲಿ 2-3 ಬಾರಿ ಅಕ್ರಮ ಮರಳುಗಾರಿಕೆ ಮಾಡುವವರ ವಿರುದ್ಧ ದಾಳಿ ನಡೆಸಿ ಅಕ್ರಮ ಮರಳುಗಾರಿಕೆ ತಡೆಗೆ ತಹಶೀಲ್ದಾರ್ ಪ್ರಯತ್ನಿಸಿದರು ಮರಳು ದಂಧೆ ನಿರಾತಂಕವಾಗಿ ನಡೆದಿದ್ದು ಯಾಂತ್ರೀಕೃತ ದೋಣಿಗಳನ್ನು ಬಳಸಿ ಮರಳುಗಾರಿಕೆ ಮಾಡುವು ದರಿಂದ ನದಿಯಲ್ಲಿ ದೊಡ್ಡ-ದೊಡ್ಡ ಪ್ರಮಾಣದ ಗುಂಡಿಗಳಾಗಿ ಜನ ಸಾಮಾನ್ಯರಿಗೆ ತಿಳಿಯದೇ ನದಿಯಲ್ಲಿ ಪ್ರಾಣಾಪಾಯಗಳಾಗುತ್ತಿವೆ.