ಯಲಬುರ್ಗಾ: ಲಿಂಗಾಯತ ಸಮಾಜಕ್ಕೆ ಸೇರಿದ ಸ್ವಾಮೀಜಿಗಳಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡುವುದನ್ನು ವಿರೋಧಿಸಿ ಇದೇ 23ರಂದು ಯಲಬುರ್ಗಾ ಬಂದ್ ಕರೆ ನೀಡಲಾಗಿದೆ ಎಂದು ವಿವಿಧ ಸಮಾಜದ ಮುಖಂಡರು ಹೇಳಿದ್ದಾರೆ.ಭಾನುವಾರ ಸಭೆ ಸೇರಿ ಈ ತೀರ್ಮಾನ ಕೈಗೊಳ್ಳಲಾಗಿದೆ, ಬಂದ್ ಕಾರ್ಯಕ್ರಮದಲ್ಲಿ ದಲಿತ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಚಲವಾದಿ ಸಮಾಜದ ಬಾಲರಾಜ ಮಂಗಳೂರ, ಡಿ.ಕೆ. ಪರುಶುರಾಮ, ಮಾದರ ಸಮಾಜದ ಹುಲಗಪ್ಪ ಬೇವೂರ, ವಸಂತ ಭಾವಿಮನಿ ಬಂಜಾರ ಸಮಾಜದ ಟೋಪ್ಪಣ್ಣ ನಾಯಕ ಹಾಗೂ ಇತರರು ತಿಳಿಸಿದ್ದಾರೆ.