ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26/11: ಜೀವದಾನ ಬೇಡಿದ ಕಸಾಬ್

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  `ಹುಸಿ ಸಿದ್ಧಾಂತತಲೆಯಲ್ಲಿ ತುಂಬಿಕೊಂಡು ನಾನು ಇಂಥ ಹೀನ ಕೃತ್ಯಕ್ಕೆ ಇಳಿಯಬೇಕಾಯಿತು. ನಾನಿನ್ನೂ ಯುವಕ. ಹಾಗಾಗಿ ಪ್ರಾಣ ತೆಗೆಯುವ ಬದಲು ಜೀವ ಕೊಡಿ~
-26/11ರ ಮುಂಬೈ ದಾಳಿ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಉಗ್ರ ಅಜ್ಮಲ್ ಕಸಾಬ್, ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ಜೀವದಾನ ಬೇಡಿದ್ದು ಹೀಗೆ.

`ದಾಳಿ ಸಂಚಿನಲ್ಲಿ ಕಸಾಬ್ ಭಾಗಿಯಾಗಿರಲಿಲ್ಲ. ಹಾಗಾಗಿ ಆತನಿಗೆ ವಿಧಿಸಿರುವ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬೇಕು~ ಎಂದು ಕಸಾಬ್ ಪರ ವಕೀಲ ರಾಜು ರಾಮಚಂದ್ರನ್ ಅವರು, ನ್ಯಾಯಮೂರ್ತಿ ಅಫ್ತಾಬ್ ಆಲಂ ಅವರನ್ನೊಳಗೊಂಡ ಪೀಠವನ್ನು ಕೋರಿದರು.

`ಕಸಾಬ್‌ಗೆ ವಿಧಿಸಿರುವ ಮರಣ ದಂಡನೆಯನ್ನು ಆತನ ವಯಸ್ಸು ಪರಿಗಣಿಸಿ ಜೀವಾವಧಿಗೆ ಇಳಿಸಬೇಕು. ಹುಸಿ ಸಿದ್ಧಾಂತ ತಲೆಯಲ್ಲಿ ತುಂಬಿಕೊಂಡ ಕಾರಣ ಕಸಾಬ್ ಈ ಕೃತ್ಯಕ್ಕೆ ಇಳಿದ. ಹಾಗಾಗಿ ಆತನನ್ನು ನೇಣಿಗೇರಿಸುವುದು ಸರಿಯಲ್ಲ~ ಎಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT