ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ರ ವರೆಗೆ ಎಎಪಿ ಸದಸ್ಯತ್ವ ಅಭಿಯಾನ

Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಮ್‌ ಆದ್ಮಿ ಪಕ್ಷ (ಎಎಪಿ) ರಾಜ್ಯದಲ್ಲಿ ಆರಂಭಿಸಿರುವ ಸದಸ್ಯತ್ವ ಅಭಿಯಾನ ಜ. 26 ರವರೆಗೆ ನಡೆ­ಯಲಿದೆ’ ಎಂದು ಪಕ್ಷದ ಕಾರ್ಯ­ಕಾರಿಣಿ ಸದಸ್ಯ ಪೃಥ್ವಿ ರೆಡ್ಡಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­­ನಾಡಿದ ಅವರು, ‘ಈ ಅವಧಿ­ಯಲ್ಲಿ ಯಾರೇ ಬೇಕಾದರೂ ಆಮ್‌ ಆದ್ಮಿ ಪಕ್ಷದ ಸದಸ್ಯರಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದ­ಕ್ಕಾಗಿ ಯಾವುದೇ ಶುಲ್ಕವನ್ನು ನೀಡ­ಬೇಕಾಗಿಲ್ಲ’ ಎಂದರು.

‘ಅರ್ಜಿಗಳನ್ನು ಸಲ್ಲಿಸಲು ದೂರ­ವಾಣಿ ಸಂಖ್ಯೆ 077982 20033 ಗೆ ‘ಮಿಸ್ ಕಾಲ್’ ನೀಡಿದರೇ ಸಾಕು ಅಥವಾ ಎಸ್‌ಎಂಎಸ್‌ ಮೂಲಕ ಹೆಸರು ಮತ್ತು ಅಂಚೆ ಸಂಖ್ಯೆಯ ಮಾಹಿತಿಯನ್ನು ನೀಡಬಹುದು’ ಎಂದು ಹೇಳಿದರು.

‘ಪಕ್ಷದ ಜಾಲತಾಣದಲ್ಲೂ ನೋಂದ­­ಣಿಗೆ ಅವಕಾಶವಿದ್ದು, aap­karagent@gmail.comಗೆ ಇಮೇಲ್‌ ಮುಖಾಂತರ ಸದಸ್ಯತ್ವವನ್ನು ಪಡೆಯ­ಬಹುದಾಗಿದೆ. ಜಿಲ್ಲಾ ಮಟ್ಟದ ಕಾರ್ಯ­ಕರ್ತರ ಬಗ್ಗೆ ಮಾಹಿತಿಯನ್ನು www.aap­karnataka.org ಆನ್‌­ಲೈನ್‌ನಲ್ಲಿ ಪಡೆಯಬಹುದು

‘ಬೆಂಗ­ಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಕಾರವಾರ, ಬೆಳಗಾವಿ ಸೇರಿ ರಾಜ್ಯದ 12 ಲೋಕ­ಸಭಾ ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧಿಸಲಿದೆ. ಮುಂದೆ ಸಂಘಟನೆ­­ನೋಡಿಕೊಂಡು ಇನ್ನಿ­ತರ ಕ್ಷೇತ್ರ­­ಗಳಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT