ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28, 29ರಂದು ನೀರು ಪೂರೈಕೆ ವ್ಯತ್ಯಯ

‘ಕಾವೇರಿ’ ನಿರ್ವಹಣಾ ಕಾರ್ಯ
Last Updated 21 ಡಿಸೆಂಬರ್ 2013, 20:11 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ಮೊದಲನೇ ಹಾಗೂ ಎರಡನೇ ಹಂತದ ಯೋಜನೆಗಳ ವಿತ­ರಣಾ ಮಾರ್ಗಗಳಲ್ಲಿ ಸೋರಿಕೆ ನಿಯಂತ್ರಿಸಲು ವಾಲ್ವ್  ಬದಲಾವ­ಣೆಯ  ಕಾಮಗಾರಿಗಳ ಹಿನ್ನೆಲೆಯಲ್ಲಿ ಇದೇ 28 ಹಾಗೂ 29ರಂದು ನಗರದ ಕೆಲವು ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಟಿ.ಕೆ ಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿಗಳಲ್ಲಿ 28ರಂದು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಮೊದಲನೇ ಹಾಗೂ ಎರಡನೇ ಹಂತದ ಯೋಜನೆಗಳ ನೀರು ಪಂಪಿಂಗ್‌ ಸ್ಥಗಿತಗೊಳಿಸಲಾ­ಗುವುದು. ಇದ­ರಿಂದಾಗಿ ಕುಮಾರಸ್ವಾಮಿ ಲೇಔಟ್, ಬನಶಂಕರಿ, ಜಯನಗರ,  ಬಸವನಗುಡಿ, ಚಾಮರಾಜಪೇಟೆ, ಪದ್ಮನಾಭನಗರ, ಬೈರಸಂದ್ರ, ಜಾನ್ಸನ್ ಮಾರ್ಕೆಟ್,  ಬಾಪೂಜಿ­ಗರ, ಮೈಸೂರು ರಸ್ತೆ,  ಶಾಂತಿನಗರ, ಕೋರ­ಮಂಗಲ, ವಿಜಯನಗರ, ಚೋಳರಪಾಳ್ಯ, ಚಿಕ್ಕಲಾಲ್‌ಬಾಗ್ ಸೇರಿದಂತೆ   ನಗರದ ಕೆಲ ಭಾಗಗಳಲ್ಲಿ  ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಶನಿವಾರ ಜಲಮಂಡಳಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT