ನವದೆಹಲಿ (ಪಿಟಿಐ): ಹೆಚ್ಚುವರಿ 2ಜಿ ತರಂಗಾಂತರ ಹಂಚಿಕೆ ಹಗರಣದ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯವು ಈ ತಿಂಗಳ 31ಕ್ಕೆ ನಿಗದಿಪಡಿಸಿದೆ.
ಈ ಹಗರಣದಲ್ಲಿ ಭಾರ್ತಿ ಟೆಲಿಕಾಂ ಕಂಪೆನಿ ಅಧ್ಯಕ್ಷ ಸುನಿಲ್ ಮಿತ್ತಲ್. ಎಸ್ಸಾರ್ ಕಂಪೆನಿಯ ರವಿ ರುಯಿಯಾ ಆಪಾದಿತರು ಎಂದು ಹೆಸರಿಸಿರುವು ದರಿಂದ ಜುಲೈ 31ರ ವಿಚಾರಣೆಗೆ ಹಾಜರಾಗಲು ತಿಳಿಸಲಾಗಿದೆ.