ಸಿಂಗಪುರ (ಪಿಟಿಐ): ಭಾರತೀಯರೇ ಹೆಚ್ಚಾಗಿ ನೆಲೆಸಿರುವ ಇಲ್ಲಿನ ಲಿಟ್ಲ್ ಇಂಡಿಯಾ ಪ್ರದೇಶದಲ್ಲಿ ಈಚೆಗೆ ನಡೆದ ಗಲಭೆಯಲ್ಲಿ ಭಾಗಿಯಾದ ಆರೋಪ ಹೊತ್ತ 52 ಭಾರತೀಯರ ಗಡೀಪಾರನ್ನು ಶುಕ್ರವಾರ ಜಾರಿ ಮಾಡಿದೆ.
ಸರ್ಕಾರ ನೇಮಿಸಿದ ತನಿಖಾ ಸಮಿತಿ 53 ಮಂದಿಯನ್ನು ತಪ್ಪಿತಸ್ಥರೆಂದು ಗುರುತಿಸಿದ ನಂತರ 52 ಭಾರತೀಯರ ಗಡೀಪಾರಿಗೆ ಆದೇಶ ಹೊರಬಿದ್ದಿತ್ತು.
ಇದೇ ತಿಂಗಳ 8ರಂದು ನಡೆದ 40 ವರ್ಷಗಳಲ್ಲೇ ದೊಡ್ಡದಾದ ಈ ಗಲಭೆಯಲ್ಲಿ ಸುಮಾರು 39 ಪೊಲೀಸರು ಮತ್ತ ಹೋಮ್ ಟೀಂ ಅಧಿಕಾರಿಗಳು ಗಾಯಗೊಂಡಿದ್ದರು. ಅಲ್ಲದೆ, 25 ಪೊಲೀಸ್ ಮತ್ತು ನಾಗರಿಕ ರಕ್ಷಣಾ ಪಡೆ ವಾಹನಗಳು ಹಾನಿಗೊಂಡಿದ್ದವು.