ಬೆಂಗಳೂರು: ಮೂಲಸೌಕರ್ಯ ಮತ್ತು ಗುಣಮಟ್ಟದ ಕೊರತೆಯ ಕಾರಣ ಆರು ಎಂ.ಇಡಿ ಕಾಲೇಜುಗಳಿಗೆ ನೀಡಿದ್ದ ಮಾನ್ಯತೆಯನ್ನು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು (ಎನ್ಸಿಟಿಇ) ರದ್ದುಗೊಳಿಸಿದೆ.
ಸೋಮವಾರ ಮುಕ್ತಾಯಗೊಂಡ ಪರಿಷತ್ತಿನ ದಕ್ಷಿಣ ಪ್ರಾದೇಶಿಕ ಸಮಿತಿಯ ನಾಲ್ಕು ದಿನಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಜಯನಗರದ ವಿಜಯಾ ಟೀಚರ್ಸ್ ಕಾಲೇಜು, ಪಟ್ಟೇಗಾರಪಾಳ್ಯದ ಸೆಂಟ್ ಪೌಲ್ಸ್ ಎಂಇಡಿ ಕಾಲೇಜು, ಶ್ರೀಮತಿ ಮೆಹ್ರಾಸ್ ಕಾಲೇಜ್ ಆಫ್ ಎಜುಕೇಷನ್, ಬೆಂಗಳೂರು ಸಿಟಿ ಕಾಲೇಜ್ ಆಫ್ ಎಜುಕೇಷನ್, ಕೆಐಇಟಿ ಕಾಲೇಜ್ ಆಫ್ ಎಜುಕೇಷನ್ ಹಾಗೂ ಕೋಲಾರ ಜಿಲ್ಲೆಯ ಬಂಗಾರಪೇಟೆಯ `ಗೋಲ್ಡ್ ಫೀಲ್ಡ್ ಆಫ್ ಎಜುಕೇಷನ್' ಕಾಲೇಜುಗಳಿಗೆ ನೀಡಲಾಗಿದ್ದ ಮಾನ್ಯತೆಯನ್ನು ಹಿಂತೆಗೆದುಕೊಳ್ಳಲಾಗಿದೆ.