ಕೃಷ್ಣರಾಜಪುರ: `ವಾರ್ಡ್ 53 ರ ವ್ಯಾಪ್ತಿಯ ಪರಿಶಿಷ್ಟ ಸಮುದಾಯದ ಅರ್ಹ 670 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. ನವೆಂಬರ್ ಒಂದರಂದು ಕೆಲವು ಗ್ರಾಮಗಳಿಗೆ ಕಾವೇರಿ ನೀರು ಪೂರೈಸಲಾಗುವುದು. ಸಂಪರ್ಕ ಕೋರಿ ಸುಮಾರು 70 ಸಾವಿರ ಅರ್ಜಿಗಳು ಬಂದಿವೆ~ ಎಂದು ಶಾಸಕ ಎನ್.ಎಸ್.ನಂದೀಶ ರೆಡ್ಡಿ ತಿಳಿಸಿದರು.
ಸೀಗೆಹಳ್ಳಿ ಗ್ರಾಮದಲ್ಲಿ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿಯು ಕೈಗೆತ್ತಿಕೊಂಡಿರುವ ವಸತಿ ಸಮುಚ್ಚಯ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, `ವಸತಿ ಸಮುಚ್ಚಯದಲ್ಲಿ 166 ಮನೆಗಳು ಇರುತ್ತವೆ. 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ~ ಎಂದರು.
ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವಯ್ಯ, ಸದಸ್ಯ ಬಾಲಕೃಷ್ಣ, ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೇಣುಗೋಪಾಲ್, ಬಿಬಿಎಂಪಿ ಸದಸ್ಯೆ ಕೆ.ಪೂರ್ಣಿಮಾ, ಸುಕುಮಾರ್ ಇದ್ದರು.