ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7.56 ಟಿಎಂಸಿ ನೀರಿಗೆ ಅನುಮತಿ ಕೋರಿಕೆ

Last Updated 23 ಡಿಸೆಂಬರ್ 2013, 19:40 IST
ಅಕ್ಷರ ಗಾತ್ರ

ಬೆಂಗಳೂರು: ಕಳಸಾ– ಬಂಡೂರಿ ನಾಲಾ ಯೋಜನೆಯಿಂದ 7.56 ಟಿಎಂಸಿ ಅಡಿ ನೀರು ಬಳಕೆ ಮಾಡಿ­ಕೊಳ್ಳಲು ಅನುಕೂಲವಾಗು­ವಂತೆ ಮಧ್ಯಂ­ತರ ಆದೇಶ ನೀಡಲು ಕೋರಿ ರಾಜ್ಯ ಮಹಾದಾಯಿ ನ್ಯಾಯ­ಮಂಡ­ಳಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಇಲ್ಲಿ ಕರೆದಿದ್ದ ವಿಧಾನಮಂಡಲದ ಉಭಯ ಸದನ­ಗಳ ನಾಯಕರ ಸಭೆಯಲ್ಲಿ ಮಧ್ಯಂತರ ಆದೇಶಕ್ಕಾಗಿ ಮನವಿ ಸಲ್ಲಿಸುವ ಕುರಿತು ಚರ್ಚೆಯಾಗಿದೆ. ಹುಬ್ಬಳ್ಳಿ– ಧಾರ­ವಾಡ, ಬಾಗಲ­ಕೋಟೆ, ಗದಗ, ಬೆಳ­ಗಾವಿ ನಗರ, ಕೆಲವು ಹಳ್ಳಿಗಳಿಗೆ ಕುಡಿ­ಯುವ ನೀರು ಪೂರೈಸಲು ರಾಜ್ಯ ಸರ್ಕಾರ ಈ ಯೋಜನೆ ಕೈಗೆತ್ತಿ­ಕೊಂಡಿದೆ. ಆದರೆ, ಗೋವಾ ರಾಜ್ಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕೇಂದ್ರ  ಮಹಾದಾಯಿ ನ್ಯಾಯ­ಮಂಡಳಿ ರಚಿಸಿದ್ದು, ಮಂಡ­ಳಿಯ ಅಧ್ಯಕ್ಷ ಜೆ.ಎಂ.ಪಾಂಚಾಲ್‌ ನೇತೃತ್ವದ ತಂಡ ವಾಸ್ತವ ಸ್ಥಿತಿ ಅರಿ­ಯಲು ರಾಜ್ಯದಲ್ಲಿ ಪ್ರವಾಸ ಹಮ್ಮಿಕೊಂಡಿದೆ.

ಮಹಾದಾಯಿ ನದಿಯಲ್ಲಿ ರಾಜ್ಯದ ಪಾಲು 24.15 ಟಿಎಂಸಿ ಅಡಿ ಎಂದು ಕರ್ನಾಟಕ ಹೇಳುತ್ತಿದೆ. ಈ ನದಿ ಮಹಾರಾಷ್ಟ್ರ, ಗೋವಾದಲ್ಲೂ ಹರಿಯುತ್ತಿದ್ದು, ಒಟ್ಟಾರೆ ಮೂರೂ ರಾಜ್ಯ­ಗಳಿಗೆ ನೀರು ಹಂಚಿಕೆಯಾಗಬೇಕು. ಮಧ್ಯಂತರ ತೀರ್ಪು ಬಂದರೆ ಕೇಂದ್ರ ಜಲ ಆಯೋಗ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆದು ಕಳಸಾ ಬಳಿ ಡ್ಯಾಂ ನಿರ್ಮಿಸಲು ಅನುಕೂಲ­ವಾಗಲಿದೆ. ಇದು ಅರಣ್ಯದ ವ್ಯಾಪ್ತಿ­ಯಲ್ಲಿ ಬರಲಿದ್ದು, ಡ್ಯಾಂ ನಿರ್ಮಾಣ­ವಾಗದ ಹೊರತು ನಾಲೆಗಳ ನಿರ್ಮಾಣ ಕಾರ್ಯ ಪೂರ್ಣ­ಗೊಂಡರೂ ನೀರು ಬಳಸಿಕೊಳ್ಳಲು ಆಗುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಜ್ಞರೊಂದಿಗೆ ಚರ್ಚೆ: ಕಾನೂನು ತಜ್ಞರೊಂದಿಗೆ ಚರ್ಚಿಸಿದ ನಂತರ ರಾಜ್ಯದ ನಿಲುವನ್ನು ನ್ಯಾಯಮಂಡಳಿಗೆ ತಿಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.ವಿರೋಧ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ     ನಾಯಕ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಎನ್.ಎಚ್‌.­ಕೋನರೆಡ್ಡಿ ಮೊದಲಾದ­ವರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT