ಬೆಂಗಳೂರು: `ಮೋಹನ್ ಫೌಂಡೇಷನ್ ವತಿಯಿಂದ ಡಿಸೆಂಬರ್ 4 ರಂದು ಅಂಗದಾನದ ಕುರಿತು ಜಾಗೃತಿ ಮೂಡಿಸಲು ಸಂತ ಸಂಗಮ ಸಮ್ಮೇಳನವನ್ನು ಆಯೋಜಿಸಲಾಗಿದೆ' ಎಂದು ಫೌಂಡೇಷನ್ನ ಸದಸ್ಯೆ ಲಲಿತಾ ರಘುರಾಮ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ಕಾರ್ಯಕ್ರಮದಲ್ಲಿ ಅಂಗದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಮತ್ತು ಅಂಗದಾನದ ಕುರಿತು ಕನ್ನಡದಲ್ಲಿರುವ ಸಾಕ್ಷಚಿತ್ರವನ್ನು ಬಿಡುಗಡೆ ಮಾಡಲಾಗುವುದು' ಎಂದರು.
ವಿಳಾಸ: ಎಸ್.ಜೆ. ಬಿ.ಐ.ಟಿ.ಸಭಾಂಗಣ, ಬಿಜಿಎಸ್ ಹೆಲ್ತ್ ಮತ್ತು ಎಜುಕೇಷನ್ ಸಿಟಿ. ಉತ್ತರಹಳ್ಳಿ ರಸ್ತೆ, ಕೆಂಗೇರಿ. ಹೆಚ್ಚಿನ ಮಾಹಿತಿ ಸಂಪರ್ಕಿಸಿ: 94480 76727