ಭದ್ರಾವತಿ: ಜಿನುಗಿ ವಾಸನೆ ಬರುತ್ತಿರುವ ಬೆಲ್ಲ, ಹೊಟ್ಟು ತುಂಬಿದ ಗೋಧಿ, ರವೆ, ಮಣ್ಣು ತುಂಬಿರುವ ಖಾರದಪುಡಿ...
- ಹೀಗೆ ಅಂಗನವಾಡಿ ಕೇಂದ್ರಕ್ಕೆ ಸರಬರಾಜಾಗಿರುವ ಎಲ್ಲಾ ವಸ್ತುಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿದೆ. ಸ್ವತಃ ಎಐಟಿಯುಸಿ ಬೆಂಬಲಿತ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಫೆಡರೇಷನ್ ಅಧ್ಯಕ್ಷೆ ಸುಶೀಲಾಬಾಯಿ ವಸ್ತುಗಳ ಸಮೇತ ಹಾಜರಾಗಿ ಆರೋಪ ಮಾಡಿದ್ದು, ಈ ಕುರಿತಂತೆ ಅಧಿಕಾರಿಗಳ ಗಮನಕ್ಕೆ ವಿಷಯ ತಿಳಿಸಿರುವುದಾಗಿ ಹೇಳಿದರು.
ಎಂಎನ್ಎಲ್ಸಿ ಮುದ್ರೆಯೊಂದಿಗೆ ಬರುವ ಅಕ್ಕಿ, ಹೆಸರು ಕಾಳು ಸ್ವಲ್ಪಮಟ್ಟಿಗೆ ಉತ್ತಮವಾಗಿದೆ. ಆದರೆ, ಯಾವುದೇ ಮುದ್ರೆ ಇಲ್ಲದೇ ಬರುವ ಇನ್ನಿತರ ವಸ್ತುಗಳು ಕಳೆಪೆಯಾಗಿದೆ ಎಂಬುದು ಅವರ ಆರೋಪ.
ಈ ಕುರಿತು ಉತ್ತಮ ವಸ್ತುಗಳನ್ನು ನೀಡುವಲ್ಲಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದು, ಅದಕ್ಕೆ ನಾಗರಿಕ ವೇದಿಕೆ ಅಜಯ್ ಸಹ ದನಿಗೂಡಿಸಿದ್ದಾರೆ.