ಬೆಂಗಳೂರು: ನಗರದ ಬಿಎಂಎಸ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಅಂಗವಿಕಲರಿಗಾಗಿ ಬ್ಯಾಟರಿಸಹಿತ ತ್ರಿಚಕ್ರ ಸೈಕಲ್ಗಳನ್ನು ಅವಿಷ್ಕರಿಸಿದ್ದಾರೆ. ಕೈಚಾಲಿತ ತ್ರಿಚಕ್ರ ಸೈಕಲ್ಗೆ ಬ್ಯಾಟರಿ ಹಾಗೂ ನಿಯಂತ್ರಕವನ್ನು ಅಳವಡಿಸಿರುವುದರಿಂದ ಅಂಗವಿಕಲರು ಈ ಹೊಸ ಸೈಕಲ್ ಅನ್ನು ಸುಲಭವಾಗಿ ಉಪಯೋಗಿಸಬಹುದು.
ಈ ಸೈಕಲ್ ಬಳಕೆಯಿಂದಾಗಿ ಕಡಿಮೆ ಸಮಯದಲ್ಲಿ ಹೆಚ್ಚಿನ ದೂರವನ್ನು ಸುಲಭವಾಗಿ ಕ್ರಮಿಸಲು ಸಾಧ್ಯವಿದೆ. ಇದರಿಂದ ಅಂಗವಿಕಲರು ಯಾವುದೇ ಅಳುಕಿಲ್ಲದೇ ಈ ಸುಧಾರಿತ ವಾಹವನ್ನು ಬಳಸಬಹುದು.
ಈ ಬಗ್ಗೆ ಯೋಜನೆಯ ಮುಖ್ಯಸ್ಥ ಪ್ರೊ.ಬಿ.ರಮೇಶ್ ನಾಯಕ್, `ತ್ರಿಚಕ್ರ ಸೈಕಲ್ಗೆ ಬಳಸಿರುವ ಬ್ಯಾಟರಿ ಹಾಗೂ ಮೋಟಾರ್ ನಿಯಂತ್ರಣ ಉಪಕರಣಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಉಪಯೋಗಿಸಿಕೊಂಡು ಬ್ಯಾಟರಿ ಚಾಲಿತ ಸೈಕಲ್ಗಳನ್ನು ಉತ್ಪಾದಿಸಬಹುದು' ಎಂದರು.