ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ'

Last Updated 3 ಡಿಸೆಂಬರ್ 2012, 20:14 IST
ಅಕ್ಷರ ಗಾತ್ರ

ಬೆಂಗಳೂರು: `ಇಚ್ಛಾಶಕ್ತಿಯಿರುವವರಿಗೆ ಅಂಗವಿಕಲತೆ ಎಂದಿಗೂ ಅಡ್ಡಿಯಾಗಲಾರದು' ಎಂದು ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಹೇಳಿದರು.

ಸ್ಯಾಪ್ ಲ್ಯಾಬ್ಸ್ ಇಂಡಿಯಾ ಸಂಸ್ಥೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ `ಇಂಡಿಯನ್ ಇನ್‌ಕ್ಲೂಷನ್ ಸಮಾವೇಶ-2012'ದಲ್ಲಿ `ಅಂಗವಿಕಲರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಸಮಾಜದ ಪಾತ್ರ' ವಿಷಯದ ಕುರಿತು ಅವರು ಮಾತನಾಡಿದರು.

`ಏನಾದರೂ ಸಾಧಿಸಬೇಕೆಂಬ ಛಲವನ್ನು ಹೊಂದಿದ ಮನುಷ್ಯನ ಅಂಗಗಳು ಊನವಾಗಿದ್ದರೂ ಸಹ ತನ್ನ ಇಚ್ಛಾಶಕ್ತಿಯಿಂದ ತನಗೆ ಅನಿಸಿದ್ದನ್ನು ವಿಶಿಷ್ಟವಾಗಿ ಸಾಧಿಸುತ್ತಾನೆ. ಅಂತಹವರು ನಮ್ಮ ಸಮಾಜಕ್ಕೆ ಸದಾ ಪ್ರೇರಣೆಯಾಗುತ್ತಾರೆ' ಎಂದು ಅವರು ಹೇಳಿದರು.

`ಸಮಾಜದಲ್ಲಿ ಅಂಗಗಳು ಊನವಾಗಿರುವ ಅಂಗವಿಕಲರಿಗಿಂತ ಮನಸ್ಸು ಊನವಾಗಿರುವವರೇ ಹೆಚ್ಚಿದ್ದಾರೆ. ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ಅಧಿಕಾರಿಗಳು, ಸಮಸ್ಯೆಗಳನ್ನು ಪರಿಹರಿಸದೆ ತಮಾಷೆ ನೋಡುತ್ತಿರುವ ಸರ್ಕಾರ, ಭ್ರಷ್ಟಾಚಾರದಿಂದ ಹಣವನ್ನು ಪಡೆಯುತ್ತಿರುವ ಅಧಿಕಾರಿಗಳು ಇವರೆಲ್ಲರೂ ಒಂದು ರೀತಿ ಅಂಗವಿಕಲರಾಗಿದ್ದಾರೆ' ಎಂದು ಹೇಳಿದರು.

`ಮಹಿಳೆಯ ಸ್ಥಿತಿಯೂ ಒಂದು ರೀತಿ ಅಂಗವಿಕಲತೆಯಿದ್ದಂತೆ. ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದರೆ, ಆಕೆಯನ್ನು ಹುಟ್ಟಿನಿಂದಲೇ ದುರ್ಬಲಳನ್ನಾಗಿ ಮಾಡುತ್ತಾ, ಕೀಳಾಗಿ ನಡೆಸಿಕೊಳ್ಳಲಾಗುತ್ತದೆ. ಈ ಆಧುನಿಕ ಯುಗದಲ್ಲಿಯೂ ಈ ಪರಿಸ್ಥಿತಿ ಮುಂದುವರಿದಿರುವುದು ದುರದೃಷ್ಟಕರ' ಎಂದರು.

`ಪುರುಷರು ತಮ್ಮ ಅಸ್ತಿತ್ವವನ್ನು ತೋರಿಸಲು ಮದ್ಯಪಾನ ಮಾಡಿ ಬಂದು ತಮ್ಮ ಹೆಂಡತಿಯರನ್ನು ಹೊಡೆಯುತ್ತಾರೆ. ಅವರನ್ನು ಹೊಡೆದು ತಮ್ಮ ಹಕ್ಕುಗಳನ್ನು ಚಲಾಯಿಸಿದೆವು ಎಂಬ ಧೋರಣೆಯಲ್ಲಿ ಬೀಗುತ್ತಾರೆ.
ಇಂತಹ ಪುರುಷರೂ ಕೂಡಾ ಒಂದು ರೀತಿಯಲ್ಲಿ ಅಂಗವಿಕಲರಾಗಿದ್ದಾರೆ' ಎಂದು ವ್ಯಾಖ್ಯಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT